ಮಡಿಕೇರಿ: ಮಡಿಕೇರಿಯ ಭಟ್ಕಳ್ ಹಾಗೂ ಎಂಎಂ ಮಸೀದಿ ಸೇರಿದಂತೆ ಜಿಲ್ಲೆಯ 45ಕ್ಕೂ ಅಧಿಕ ಜಮಾ ಅತ್ ಗಳ ಖಾಝಿಯಾಗಿದ್ದ ಹಿರಿಯ ವಿದ್ವಾಂಸ, ಪೂಕಳಂ ಅಬ್ದುಲ್ಲ ಮುಸ್ಲಿಯಾರ್ (85) ಅವರು ಅ. 31ರಂದು ವಿಧಿವಶರಾದರು.
ಪತ್ನಿ, 6 ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ. ಇಂದು ಬೆಳಗ್ಗೆ 9 ಗಂಟೆಗೆ ಕೇರಳದ ಕಾಞಂಗಾಡಿನ ನರಙಡಿಯಲ್ಲಿ ನಡೆಯಿತು. ಮೃತರ ಸ್ಮರಣಾರ್ಥ ಶುಕ್ರವಾರ ಜುಮಾ ನಮಾಝಿನ ಬಳಿಕ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿ ಮಯ್ಯಿತ್ ನಮಾಝ್ ನಿರ್ವಹಿಸುವಂತೆ ನಗರದ ಎಂ ಎಂ ಮಸೀದಿಯ ಧರ್ಮಗುರು ಹಮೀದ್ ಮದನಿ ಕರೆ ನೀಡಿದ್ದಾರೆ.