News Kannada
Friday, March 24 2023

ಕರ್ನಾಟಕ

ಕಾಸರಗೋಡು: ಕನ್ನಡ ಶಿಕ್ಷಕರ ನೇಮಕಕ್ಕೆ ಕನ್ನಡದಲ್ಲಿಯೇ ಸಮತ್ವ ಪರೀಕ್ಷೆಗೆ ಆಗ್ರಹ

Photo Credit :

ಕಾಸರಗೋಡು: ಕನ್ನಡ ಶಿಕ್ಷಕರ ನೇಮಕಕ್ಕೆ ಕನ್ನಡದಲ್ಲಿಯೇ ಸಮತ್ವ ಪರೀಕ್ಷೆಗೆ ಆಗ್ರಹ

ಕಾಸರಗೋಡು: ಕನ್ನಡ ಮಾಧ್ಯಮ ತರಗತಿಗೆ ಕನ್ನಡ ಬಲ್ಲ ಅಧ್ಯಾಪಕರನ್ನೇ ನೇಮಕ ಮಾಡಬೇಕು, ಕನ್ನಡ ಮಾಧ್ಯಮ ಪ್ಲಸ್ ವನ್ ಸಮತ್ವ ಪರೀಕ್ಷೆಯನ್ನು ಕನ್ನಡದಲ್ಲಿಯೇ ನಡೆಸಬೇಕೆಂದು ಆಗ್ರಹಿಸಿ ಕಾಸರಗೋಡು ಜಿಲ್ಲಾ ಪಂಚಾಯತು ನಿಯೋಗ ರಾಜ್ಯ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ರಾಜ್ಯ ಕಲೋತ್ಸವದ ಸ್ವಾಗತ ಸಮಿತಿ ಸಭೆಗೆಂದು ಕಾಂಞಂಗಾಡಿಗೆ ತಲುಪಿದ ರಾಜ್ಯ ಶಿಕ್ಷಣ ಸಚಿವ ರವೀಂದ್ರನಾಥ್ ಅವರನ್ನು ಕಾಸರಗೋಡು ಜಿ.ಪಂ.ಅಧ್ಯಕ್ಷ ಎಜಿಸಿ ಬಶೀರ್ ನೇತೃತ್ವದ ಜಿ.ಪಂ.ಸದಸ್ಯರ ತಂಡ ಭೇಟಿ ಮಾಡಿ , ಜಿಲ್ಲೆಯ ಕನ್ನಡ ಭಾಷಾ ವಿದ್ಯಾರ್ಧಿಗಳು ಅನುಭವಿಸುವ ಸಮಸ್ಯೆಗಳನ್ನು ಗಮನಕ್ಕೆ ತಂದರು. ಕನ್ನಡ ತರಗತಿಗೆ ಕನ್ನಡ ಅರಿಯದ ಅಧ್ಯಾಪಕರನ್ನು ನೇಮಕ ಮಾಡುವ ಪಿಎಸ್ ಸಿ ಪ್ರಕ್ರಿಯೆಯನ್ನು ತಡೆಹಿಡಿಯುವಂತೆಯೂ, ಕನ್ನಡ ಮಾಧ್ಯಮ ಹೈಯ್ಯರ್ ಸೆಕೆಂಡರಿ ಸಮತ್ವ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿಯೇ ನಡೆಸುವಂತೆ ಆಗ್ರಹಿಸಲಾಯಿತು.

ನಿಯೋಗದಲ್ಲಿ ಉಪಾಧ್ಯಕ್ಷೆ ಶಾಂತಮ್ಮ ಪಿಲಿಫ್, ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಶಾನವಾಜ್ ಪಾದೂರ್, ಸದಸ್ಯರಾದ ಶ್ರೀಕಾಂತ್, ನಾರಾಯಣನ್, ಇ.ಪದ್ಮಾವತಿ, ಝುಬೈದಾ, ಜಿ.ಪಂ.ಕಾರ್ಯದರ್ಶಿ ನಂದಕುಮಾರ್ ಜತೆಗಿದ್ದರು. ಸಮತ್ವ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿಯೇ ನಡೆಸಲು ಕ್ರಮ ಕೈಗೊಳ್ಳಲಾಗುವುದೆಂದು ಅವರು ಭರವಸೆ ನೀಡಿದರು.

ಕನ್ನಡ ಭಾಷೆ ಅರಿಯದ ಅಧ್ಯಾಪಕರ ನೇಮಕಾತಿಯ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

 

See also  ಕಾರವಾರ: ರೈಲಿನಲ್ಲಿ ಮಾದಕ ಮಾತ್ರೆಗಳ ಸಾಗಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು