News Kannada
Friday, March 31 2023

ಕರ್ನಾಟಕ

ಕನ್ನಡ ಶಾಲೆಯಲ್ಲಿ ಮಲಯಾಳ ಶಿಕ್ಷಕರ ನೇಮಕ: ಶಾಸಕ ಎಂ.ಸಿ. ಖಮರುದ್ದೀನ್ ಅಸಮಾಧಾನ

Photo Credit :

 ಕನ್ನಡ ಶಾಲೆಯಲ್ಲಿ ಮಲಯಾಳ ಶಿಕ್ಷಕರ ನೇಮಕ: ಶಾಸಕ ಎಂ.ಸಿ. ಖಮರುದ್ದೀನ್ ಅಸಮಾಧಾನ

ಕಾಸರಗೋಡು : ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡೇತರ ಶಿಕ್ಷಕರ ನೇಮಕದ ಬಗ್ಗೆ ತಾನು ಸರಕಾರದ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ಶಿಕ್ಷಣ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ . ಕನ್ನಡ ಪಾಠಕ್ಕೆ ಕನ್ನಡ ಶಿಕ್ಷಕರನ್ನು ನೇಮಿಸಬೇಕು. ಮೂಡಂಬೈಲು ಕನ್ನಡ ಶಾಲೆಯಲ್ಲಿ ಮಲಯಾಳ ಶಿಕ್ಷಕರನ್ನು ನೇಮಿಸಲಾಗಿದೆ. ಇದು ಸರಿ ಅಲ್ಲ . ಈ ಬಗ್ಗೆ ಯಾವುದೇ ರೀತಿಯ ಹೋರಾಟಕ್ಕೂ ಬದ್ದ , ವಿಧಾನಸಭಾ ಅಧಿವೇಶದಲ್ಲಿ ಅವಕಾಶ ಸಿಕ್ಕಿದರೆ ಮತ್ತೆ ಧ್ವನಿಯೆತ್ತುವೆ ಎಂದು ಮಂಜೇಶ್ವರ ಶಾಸಕ ಎಂ .ಸಿ ಖಮರುದ್ದೀನ್ ಹೇಳಿದರು.

ಶಾಸಕರಾಗಿ ಆಯ್ಕೆಯಾದ ಬಳಿಕ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿ ಇಂದು ( ಶನಿವಾರ ) ಉಪ್ಪಳ ರೈಲು ನಿಲ್ದಾಣದಲ್ಲಿ ಬಂದಿಳಿದ ಶಾಸಕರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ಮೊದಲ ಬಾರೀ ಆಯ್ಕೆಯಾದ ತನಗೆ ಮೊದಲ ಅಧಿವೇಶನದಲ್ಲೇ ಮಂಜೇಶ್ವರ ಕ್ಷೇತ್ರದ ಸಮಸ್ಯೆಗಳನ್ನು ಮುಂದಿಡಲು ಸಾಧ್ಯವಾಯಿತು . ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಸರಕಾರದ ಗಮನಸೆಳೆದಿದ್ದು , ಶೀಘ್ರ ಕಾಮಗಾರಿ ಆರಂಭಿಸುವ ಭರವಸೆ ಲಭಿಸಿದೆ. ಉಪ್ಪಳ ಮುಸೋಡಿ , ಕೊಯಿಪಾಡಿ ಹಾಗೂ ಇತರ ಕಡೆಗಳಲ್ಲಿನ ಕಡಲ್ಕೊರೆತ ಕ್ಕೆ ಶಾಶ್ವತ ಪರಿಹಾರ ಕಾಣುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಸಚಿವರ ಜೊತೆ ಮಾತುಕತೆ ನಡೆಸಿದ್ದೇನೆ . ಕುಂಬಳೆ ಸರಕಾರೀ ಆಸ್ಪತ್ರೆ ಬಗ್ಗೆಯೂ ಸಚಿವರಿಗೆ ಮನವಿ ಮಾಡಿದ್ದು , ಇದಕ್ಕೂ ಶೀಘ್ರ ಪರಿಹಾರ ಲಭಿಸಲಿದೆ.

ಕ್ಷೇತ್ರದ ಜನತೆಯ ಸಮಸ್ಯೆ , ಅಭಿವೃದ್ಧಿ ಗೆ ಗಮನ ನೀಡುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯುವುದಾಗಿ ಶಾಸಕರು ಹೇಳಿದರು. ಶಾಸಕರನ್ನು ರೈಲು ನಿಲ್ದಾಣದಲ್ಲಿ ಯು ಡಿ ಎಫ್ ಕಾರ್ಯಕರ್ತರು ಭವ್ಯ ಸ್ವಾಗತ ನೀಡಿ ಉಪ್ಪಳ ಪೇಟೆ ತನಕ ಮೆರವಣಿಗೆಯಲ್ಲಿ ಕರೆತಂದರು

See also  ಚಿರತೆ ಹಾವಳಿ ತಡೆಗೆ ಆಗ್ರಹಿಸಿ ರೈತರ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು