News Kannada
Thursday, March 30 2023

ಕರ್ನಾಟಕ

ಶಾಂತಿ ಕಾಪಾಡಲು ಸಜ್ಜಾದ ಕೊಡಗು ಪೊಲೀಸರು: ಕಿಡಿಗೇಡಿಗಳನ್ನು ಹತ್ತಿಕ್ಕಲು ಪೂರ್ವಭಾವಿ ತಯಾರಿ

Photo Credit :

ಶಾಂತಿ ಕಾಪಾಡಲು ಸಜ್ಜಾದ ಕೊಡಗು ಪೊಲೀಸರು: ಕಿಡಿಗೇಡಿಗಳನ್ನು ಹತ್ತಿಕ್ಕಲು ಪೂರ್ವಭಾವಿ ತಯಾರಿ

ಮಡಿಕೇರಿ: ಮುಂದಿನ ಕೆಲವೇ ದಿನಗಳಲ್ಲಿ ಸುಪ್ರಿಂ ಕೋರ್ಟ್‍ನಿಂದ ಹೊರ ಬೀಳಲಿರುವ ಅಯೋಧ್ಯೆ ತೀರ್ಪು, ಟಿಪ್ಪು ಜಯಂತಿ ಆಚರಣೆಯ ಪರ-ವಿರೋಧ ಅಭಿಪ್ರಾಯ, ಈದ್ ಮಿಲಾದ್ ಆಚರಣೆ, ಈ ಸಂದರ್ಭಗಳಲ್ಲಿ ಶಾಂತಿ ಕಾಪಾಡಿಕೊಳ್ಳವಂತೆ ಸರಕಾರ ನೀಡಿದ ಆದೇಶವನ್ನು ಪಾಲಿಸಲು ಸಜ್ಜಾಗಿರುವ ಕೊಡಗು ಜಿಲ್ಲಾ ಪೊಲೀಸರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಇಂದು ಮಡಿಕೇರಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗಲಭೆಕೋರರನ್ನು ನಿಯಂತ್ರಿಸಿ, ಸಾರ್ವಜನಿಕ ಶಾಂತಿ ಕಾಪಾಡುವ ಕುರಿತು ಅಣುಕು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಹಿಂದೆ ಜಿಲ್ಲೆಯಲ್ಲಿ ನಡೆದಿದ್ದ ಗಲಭೆಗಳನ್ನು ಹತ್ತಿಕ್ಕುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾದ ಹಿನ್ನೆಲೆಯನ್ನು ಮುಂದಿಟ್ಟುಕೊಂಡು ಅಣುಕು ಪ್ರದರ್ಶನವನ್ನು ನಡೆಸಲಾಯಿತು. ಒಂದು ಗುಂಪು ಪೊಲೀಸ್ ಸೂಚನೆಯನ್ನು ಧಿಕ್ಕರಿಸಿ ಕಾನೂನು ಉಲ್ಲಂಘನೆ ನಡೆಸುವ ಮೂಲಕ ಸಾರ್ವಜನಿಕ ಶಾಂತಿಯನ್ನು ಭಂಗಪಡಿಸಲು ಮುಂದಾದಾಗ ಅವರನ್ನು ಯಾವ ರೀತಿ ಹೆಡೆಮುರಿ ಕಟ್ಟಲಾಗುತ್ತದೆ, ಪೊಲೀಸರ ಕೊನೆಯ ಅಸ್ತ್ರ ಹೇಗಿರಲಿದೆ, ಯಾವ ರೀತಿಯ ತಂತ್ರಗಳನ್ನು ಅನುಸರಿಸಲಾಗುತ್ತದೆ ಎಂದು ಅಣುಕು ಪ್ರದರ್ಶನದ ಮೂಲಕ ಸಾರ್ವಜನಿಕ ಶಾಂತಿ ಮತ್ತು ಪೊಲೀಸ್ ಸೂಚನೆಯನ್ನು ಉಲ್ಲಂಘಿಸುವವರಿಗೆ ಸ್ಪಷ್ಟ ಸಂದೇಶ ರವಾನಿಸಲಾಯಿತು.

ಸ್ಮೋಕ್ ಫ್ಯಾಘ್‍ನ ಎಚ್ಚರಿಕೆ, ಅಶ್ರುವಾಯು ಮೂಲಕ ಗುಂಪು ಚದುರಿಸುವ ಪ್ರಯತ್ನ ಅದೂ ಫಲಪ್ರದವಾಗದಾಗ ಲಾಠಿ ಚಾರ್ಜ್ ಪ್ರಯೋಗ, ಇದಕ್ಕೂ ಬಗ್ಗದಿದ್ದಲ್ಲಿ ಕೊನೆಯ ಅಸ್ತ್ರ ಎಂಬಂತೆ ಮೊಣಕಾಲ ಕೆಳಗೆ ಗುಂಡು ಹೊಡೆಯುವ ಮೂಲಕ ಗಲಭೆಕೋರರನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಸಮರ್ಥವಾಗಿದೆ ಎಂದು ಸಾರ್ವಜನಿಕರಿಗೆ ಅಭಯದ ಸಂದೇಶ ರವಾನಿಸಲಾಯಿತು.

ಕೊಡಗು ಜಿಲ್ಲಾ ವಿಶೇಷ ಸ್ಟ್ರೈಕ್ ಟೀಂ ಲಾಠಿ ಚಾರ್ಜ್ ನಡೆಸುವ ಅಣುಕು ಪ್ರದರ್ಶನ ಮಾಡಿದರೆ, ಜಿಲ್ಲಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಗಲಭೆಕೋರರ ಗುಂಪು ಎಂಬಂತೆ ಅಣುಕು ಪ್ರದರ್ಶನ ನೀಡಿತು. ಜಿಲ್ಲೆಯ ವಿವಿಧ ತಾಲೂಕು ಠಾಣೆಗಳ ಡಿವೈಎಸ್‍ಪಿಗಳು, ವೃತ್ತ ನಿರೀಕ್ಷರು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಣುಕು ಪೊಲೀಸ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

See also  ರಾಜ್ಯದಲ್ಲಿ ಕಡಿಮೆಯಾದ ಕೋವಿಡ್ ಪಾಸಿಟಿವ್ ಪ್ರಕರಣ: ರಾತ್ರಿ ಕರ್ಫ್ಯೂ ರದ್ದು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು