News Kannada
Sunday, March 26 2023

ಕರ್ನಾಟಕ

ಟಿಪ್ಪು ದಾಳಿಯಿಂದ ಸಾವನ್ನಪ್ಪಿದವರಿಗೆ ಪುಷ್ಪಾಂಜಲಿ ಅರ್ಪಿಸಿದ ಸಿಎನ್‍ಸಿ

Photo Credit :

ಟಿಪ್ಪು ದಾಳಿಯಿಂದ ಸಾವನ್ನಪ್ಪಿದವರಿಗೆ ಪುಷ್ಪಾಂಜಲಿ ಅರ್ಪಿಸಿದ ಸಿಎನ್‍ಸಿ

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಭಾಗಮಂಡಲ ಸಮೀಪದ ದೇವಾಟ್ ಪರಂಬುವಿನಲ್ಲಿ ಟಿಪ್ಪು ಸುಲ್ತಾನನ ದಾಳಿಯಿಂದ ಸಾವನ್ನಪ್ಪಿದವರಿಗೆ  ಪುಷ್ಪಾಂಜಲಿಯನ್ನು  ಅರ್ಪಿಸಲಾಯಿತು.

1785ರ ಡಿ.12ರಂದು ನಡೆದ ನರಮೇಧ ದುರಂತಕ್ಕೆ ಬಲಿಯಾದವರಿಗೆ  ಶ್ರದ್ಧಾ ಭಕ್ತಿಯಿಂದ ಶಾಂತಿ ಕೋರಲಾಯಿತು. 32 ಬಾರಿ ಕೊಡವ ಬುಡಕಟ್ಟು ಯೋಧರಿಂದ ಸತತ ಸೋಲುಂಡ  ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್,  ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯ ಮಿತ್ರ ಪಡೆಯೊಂದಿಗೆ ಫ್ರೆಂಚ್ ಜನರಲ್  ಲಾಲಿ ಮತ್ತು ಕರ್ನೂಲಿನ  ನವಾಬ ರಣಮಸ್ತ ಖಾನ್ ಸೇನಾ ಮುಂದಾಳತ್ವದಲ್ಲಿ ದೇವಾಟ್ ಪರಂಬ್‍ನಲ್ಲಿ ಕಗ್ಗೊಲೆ ನಡೆಸಿದ್ದ. ಈ ಹಿನ್ನೆಲೆಯಲ್ಲಿ  ಮಡಿದವರಿಗೆ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪುಷ್ಪಾಂಜಲಿ ಅರ್ಪಣೆ ಕಾರ್ಯಕ್ರಮದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ  ಎನ್.ಯು.ನಾಚಪ್ಪ, ಕಲಿಯಂಡ ಪ್ರಕಾಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕಾಟುಮಣಿಯಂಡ ಉಮೇಶ್, ಬೇಪಡಿಯಂಡ ಬಿದ್ದಪ್ಪ, ಮಂದಪಂಡ ಮನೋಜ್, ಅಳ ಮಂಡ ಜೈ, ಮಂದಪಂಡ ಸೂರಜ್ ಮತ್ತು ಚೀಯಬರ ಸೋಮಯ್ಯ  ಭಾಗವಹಿಸಿದ್ದರು.

See also  ಪ್ರಚೋದನಕಾರಿ ಟ್ವೀಟ್, ಕರಂದ್ಲಾಜೆ ವಿರುದ್ಧ ಎಫ್‌ಐಆರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

145

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು