ಕಾಸರಗೋಡು : ಅಪ್ರಾಪ್ತ ಬಾಲಕಿ ಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಕೊನೆಯುಸಿರು ತನಕ ಸಜೆ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಇಂದು ತೀರ್ಪು ನೀಡಿದೆ.
ಕರಿವೇಡಗಂ ಶಂಕ್ರಪಾಡಿ ಯ ವಿ . ಎಸ್ ರವೀಂದ್ರನ್ ( ೪೬) ಕಠಿಣ ಸಜೆಗೊಳಗಾದ ಆರೋಪಿ . ೨೫ ಸಾವಿರ ರೂ .ದಂಡ ವಿಧಿಸಲಾಗಿದೆ.
ಪೋಕ್ಸೋ ಕಾಯ್ದೆ ತಿದ್ದುಪಡಿ ಜಾರಿಗೆ ಬಂದ ಬಳಿಕ ರಾಜ್ಯದ ಮೊದಲ ತೀರ್ಪು ಆಗಿದೆ . ೨೦೧೮ ರ ಅಕ್ಟೋಬರ್ ಒಂಭತ್ತರಂದು ಘಟನೆ ನಡೆದಿತ್ತು .
ಆರೋಪಿಯ ಮನೆಗೆ ಆಟವಾಡಲು ಬಂದಿದ್ದ ನಾಲ್ಕು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದಲ್ಲಿ ೨೨ ಸಾಕ್ಷಿಗಳನ್ನು ವಿಸ್ತರಿಸಲಾಗಿತ್ತು. ೨೩ ದಾಖಲೆಗಳನ್ನು ಹಾಜರು ಪಡಿಸಲಾಗಿತ್ತು .
ಬೇಡಡ್ಕ ಪೊಲೀಸರು ಪ್ರಕರಣ ದಾಖಲಿಸಿದ್ದು , ಡಿ ವೈ ಎಸ್ ಪಿ ಹರೀಶ್ಚಂದ್ರ ನಾಯಕ್ ಆರೋಪ ಪಟ್ಟಿ ಸಲ್ಲಿಸಿದ್ದರು . ಪ್ರಾಸಿಕ್ಯೂಟರ್ ಪರ ಪ್ರಕಾಶ್ ಅಮ್ಮಣ್ಣಾಯ ರವರು ಹಾಜರಾಗಿದ್ದರು