ಬೆಳ್ತಂಗಡಿ: ಮತ ಎಣಿಕೆ ಕೇಂದ್ರದ ಹೊರಗಡೆ ವಿಜಯೋತ್ಸವ ಆಚರಿಸುತ್ತಿದ್ದ ಸಮಯದಲ್ಲಿ ಪಾಕಿಸ್ತಾನದ ಪರ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಮತ ಏಣಿಕೆ ಕೇಂದ್ರದ ಹೊರಗೆ ರಾಜಕೀಯ ಪಕ್ಷಗಳ ಸಾವಿರಾರು ಕಾರ್ಯಕರ್ತರು ಸೇರಿದ್ದ ಸಂದರ್ಭದಲ್ಲಿ ಒಂದೊಂದೇ ಕ್ಷೇತ್ರದ ಫಲಿತಾಂಶ ಹೊರ ಬೀಳುತ್ತಿದ್ದಂತೆ ಎಸ್ ಡಿಪಿಐ ಕಾರ್ಯಕರ್ತರು ಪಾಕಿಸ್ಥಾನ ಪರ ಘೋಷಣೆಗಳನ್ನು ಕೂಗಿದ್ದಾರೆ.
ಬಿಜೆಪಿ ಕಾರ್ಯಕರ್ತರು ತಮ್ಮ ಬೆಂಬಲಿತ ಅಭ್ಯರ್ಥಿಗಳು ವಿಜಯಿಯಾದಾಗ ಪಕ್ಷದ ಘೋಷಣೆ ಕೂಗೂತ್ತಾ, ಬವುಟ ಹಾರಸಿ ವಿಜಯೋತ್ಸವದಲ್ಲಿ ತೊಡಗಿದ್ದರು. ಈ ವೇಳೆ ಎಸ್ ಡಿಪಿಐ ಪಕ್ಷದ ಕಾರ್ಯಕರ್ತರು ಘೋಷಣೆಗಳನ್ನು ಕೂಗೂತ್ತಾ ಬಿಜೆಪಿ ಕಾರ್ಯಕರ್ತರ ಬಳಿ ಬಂದರು. ಎರಡೂ ಪಕ್ಷದ ಬೆಂಬಲಿಗರ ಘೋಷಣೆಗಳು ತಾರಕಕ್ಕೇರಿದಾಗ ಎಸ್ ಡಿಪಿಐ ಕಡೆಯಿಂದ “ಪಾಕಿಸ್ಥಾನ ಜಂದಾಬಾದ್” ಘೋಷಣೆ ಕೂಗಲಾಯಿತು. ಈ ಬಗ್ಗೆ ವಿಷಯ ತಿಳಿದ ವೃತ್ತ ನಿರಕ್ಷಕ ಸಂದೇಶ್ ಪಿಜಿ ಹಾಗೂ ಅವರ ಗುಂಪು ಇವರನ್ನೆಲ್ಲ ಚದುರಿಸಿದರು. ನಂತರ ಪೋಲೀಸ್ ಸಿಬ್ಬಂದಿಗಳನ್ನು ಇನ್ನು ಹೆಚ್ಚು ಬಲ ಪಡಿಸಲಾಯಿತು ಎಂದು ಹೇಳಲಾಗುತ್ತಿದೆ.