News Kannada
Sunday, March 26 2023

ಬಾಗಲಕೋಟೆ

ಎಸ್ಸಾರ್‌ ಪಾಟೀಲ ಅವರಿಗೆ ಟಿಕೆಟ್ ತಪ್ಪಿಲ್ಲ : ಸಿದ್ದರಾಮಯ್ಯ

Photo Credit :

ಬಾಗಲಕೋಟೆ: ಪಕ್ಷದ ಹಿರಿಯ ಮುಖಂಡ ಎಸ್ಸಾರ್‌ ಪಾಟೀಲ ಅವರಿಗೆ ಟಿಕೆಟ್ ತಪ್ಪಿಲ್ಲ. ವರಿಷ್ಠರು ಎರಡು ಟಿಕೆಟ್ ಕೊಡ್ತೀವಿ ಅಂತ ಹೇಳಿದರು, ಇವರು ಒಂದು ಕೊಟ್ಟರೆ ಮಾತ್ರ ನಿಲ್ಲುತ್ತೇನೆ ಅಂತ ಹೇಳಿದರು ನನಗೊಬ್ಬನಿಗೆ ಕೊಟ್ಟರೆ ಮಾತ್ರ ನಿಲ್ತೀನಿ ಅಂತ ಹೇಳಿದರು ಹಂಗಾಗಿ ಹೈಕಮಾಂಡ್ ಆ ತರಹದ ನಿರ್ಧಾರ ತೆಗೆದುಕೊಂಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯಲ್ಲಿ ಇಂದು ಪರಿಷತ್ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ವೇಳೆ ಅವರು ಈ ರೀತಿ ಹೇಳುವ ಮೂಲಕ ಟಿಕೆಟ್ ತಪ್ಪಲು ತಾವು ಕಾರಣರಲ್ಲ ಎಂದು ಸ್ಪಷ್ಟ ಪಡಿಸಿದರು.

ಇದೇ ವೇಳೆ ಅವರು ಚುನಾವಣೆಯಲ್ಲಿ ಜೆಡಿಎಸ್ ಎಫೆಕ್ಟ್ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಲು ಸಿದ್ದು ನಿರಾಕರಿಸುತ್ತ ನಾನು ಜೆಡಿಎಸ್ ಬಗ್ಗೆ ಮಾತನಾಡಲ್ಲ. ಅವರ ಬಗ್ಗೆ ಕೇಳಬೇಡಿ. ಅವರೆಲ್ಲಾ ನಾಲ್ಕೈದು ಜಿಲ್ಲೆಗಳಲ್ಲಿ ಇರುವಂತವರು, ಅಂಥವರ ಬಗ್ಗೆ ನಾನು ಮಾತನಾಡಲ್ಲ ಎಂದ ಸಿದ್ದರಾಮಯ್ಯ ತಿರುಗೇಟು ನೀಡಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕುರಿತು ಮಾತನಾಡಿದ ಅವರು ಏನು ನಡೀತಾ ಇದೆ ಅಂತ ನನಗೆ ಗೊತ್ತಿಲ್ಲ. ಬಿಜೆಪಿಯಲ್ಲಿ ಗುಂಪಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಯಡಿಯೂರಪ್ಪನನ್ನು ತೆಗೆದು ಹಾಕಿದರು. ಯಡಿಯೂರಪ್ಪನ್ನ ಗುಂಪುಗಾರಿಕೆಯಿಂದ ಅಲ್ಲವೇ ತೆಗೆದು ಹಾಕಿದ್ದು. ಯತ್ನಾಳ್ ದಿನಾಲು ಏನು ಮಾಡುತ್ತಿದ್ದಾರೆ. ೧೦ನೇ ತಾರೀಖು ಏನು ಬದಲಾವಣೆ ಆಗುತ್ತೆ ಅಂತ ಯತ್ನಾಳ್ ಅವರನ್ನು ಕೇಳಿ. ನನಗೆ ಗೊತ್ತಿಲ್ಲ ನಾನೇನು ಅವರ ಜೊತೆ ಮಾತನಾಡಿಲ್ಲ ಎಂದರು.

See also  ಆರ್‌ಎಸ್‌ಎಸ್‌ ಒಂದು ಕೋಮುವಾದಿ ಸಂಘಟನೆ- ಮಾಜಿ ಸಿಎಂ ಸಿದ್ದರಾಮಯ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು