ವಿಧಾನ ಪರಿಷತ್ ಚುನಾವಣೆ ಫಲಿತಾಂಶಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಖುಷಿ ವ್ಯಕ್ತ ಪಡಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ರಾಜ್ಯದ ಜನತೆಗೆ ಬಿಜೆಪಿ ಆಡಳಿತ ಬೇಡವಾಗಿದೆ. ಹಾಗಾಗಿ ಪರಿಷತ್ ಚುನಾವಣೆಯಲ್ಲಿ 25 ಕ್ಷೇತ್ರಗಳ ಪೈಕಿ 11 ರಿಂದ 12 ಸ್ಥಳಗಳು ಕಾಂಗ್ರೆಸ್ ಪಾಲಾಗಿವೆ ಎಂದರು.
ಚಿಕ್ಕಮಗಳೂರು ಕ್ಷೇತ್ರದ ಫಲಿತಾಂಶ ಬಗ್ಗೆ ಕೋರ್ಟ್ಗೆ ಹೋಗುತ್ತೇವೆ. ಇನ್ನು ಬೆಳಗಾವಿಯಲ್ಲಿ ನಾವೇ ನಂಬರ್ ಒನ್. ಇನ್ನು ಬೆಳಗಾವಿಯಲ್ಲಿ ಬಿಜೆಪಿಯನ್ನ ಸೋಲಿಸಿದ್ದು ರಮೇಶ್ ಜಾರಕಿಹೊಳಿ’ ಎಂದರು.
ಇನ್ನು ಇದೇ ವೇಳೆ ಪರಿಷತ್ ಚುನಾವಣೆಯಲ್ಲಿ ಗೆಲವು ಸಾಧಿಸಿದ ಎಲ್ಲ ಕಾಂಗ್ರೆಸ್ ಆಭ್ಯರ್ಥಿಗಳಿಗೆ ಆಭಿನಂದನೆ ಸಲ್ಲಿಸಿದರು.