News Karnataka Kannada
Friday, April 19 2024
Cricket
ಹುಬ್ಬಳ್ಳಿ-ಧಾರವಾಡ

ಧಾರವಾಡದಲ್ಲಿ ಸರಣಿ ಮನೆಗಳ್ಳತನ, ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿ

Latest News
Photo Credit :

ಧಾರವಾಡ : ಧಾರವಾಡದ ವಿಜಯಾನಂದನಗರ ಹಾಗೂ ಭಾವಿಕಟ್ಟಿ ಪ್ಲಾಟ್‌ನಲ್ಲಿ ಮೂರು ಮನೆಗಳಿಗೆ ಕನ್ನ ಹಾಕಿರುವ ಖದೀಮರು ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

ಭಾವಿಕಟ್ಟಿ ಪ್ಲಾಟ್‌ನ ಕಲ್ಲಪ್ಪ ಜೋಡಳ್ಳಿ, ವಿಜಯಾನಂದನಗರದ ನಿರ್ಮಲಾ ಬಂಕಾಪುರ ಹಾಗೂ ವೆಂಕಟೇಶ ಟಿಕಾನದಾರ ಎಂಬುವವರ ಮನೆಗೆ ಕನ್ನ ಹಾಕಿರುವ ಕಳ್ಳರು ಅಪಾರ ಪ್ರಮಾಣದ ಚಿನ್ನದ ವಸ್ತು ಹಾಗೂ ನಗದು ದೋಚಿಕೊಂಡು ಹೋಗಿದ್ದಾರೆ.

ಈ ಮೂರೂ ಮನೆಯವರು ಊರಿಗೆ ಹೋದ ಸಂದರ್ಭವನ್ನು ಬಳಕೆ ಮಾಡಿಕೊಂಡ ಕಳ್ಳರು, ಮನೆಯ ಕೀಲಿ ಒಡೆದು ಒಳನುಗ್ಗಿ ಕಲ್ಲಪ್ಪ ಜೋಡಳ್ಳಿ ಅವರ ಮನೆಯ ಅಲ್ಮೆರಾದಲ್ಲಿದ್ದ 10 ಗ್ರಾಂ ಚಿನ್ನದ ಸರ, 15 ಸಾವಿರ ನಗದು ಹಾಗೂ ನಿರ್ಮಲಾ ಬಂಕಾಪುರ ಅವರ ಮನೆಯಲ್ಲಿದ್ದ 40 ಗ್ರಾಂ ಚಿನ್ನದ ವಸ್ತು, 80 ಸಾವಿರ ರೂಪಾಯಿ ನಗದು ದೋಚಿದ್ದಾರೆ. ಇನ್ನು ವೆಂಕಟೇಶ ಟಿಕಾನದಾರ ಅವರ ಮನೆಯಲ್ಲೂ ಕಳ್ಲತನ ಎಸಗಿರುವ ಖದೀಮರು ಅವರ ಮನೆಯಲ್ಲೂ ಕಳ್ಳತನ ಎಸಗಿದ್ದಾರೆ.

ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಬೆರಳಚ್ಚು ತಜ್ಞರು ಮತ್ತು ಶ್ವಾನದಳದವರೂ ಭೇಟಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು