ಹುಬ್ಬಳ್ಳಿ : ಭಾರತದ ಆರ್ಥಿಕತೆಗೆ ಮಾರಕವಾಗಿರುವ ‘ಹಲಾಲ್ ಪ್ರಮಾಣ ಪತ್ರ’ವನ್ನು ಕೇಂದ್ರ ಸರ್ಕಾರ ರದ್ದುಪಡಿಸಬೇಕು. ಈ ಬಾರಿ ‘ಹಲಾಲ್ ಮುಕ್ತ ದೀಪಾವಳಿ’ ಅಭಿಯಾನ ಆರಂಭಿಸಲಾಗುವುದು ಎಂದು ಶ್ರೀ ರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹಾಗೂ ಹಿಂದು ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತ ಸರ್ಕಾರ ನೀಡುವ ಎಫ್ಎಸ್ಎಸ್ಎಐ ಪ್ರಮಾಣ ಪತ್ರಕ್ಕೆ ಪರ್ಯಾಯವಾಗಿ, ಮುಸ್ಲಿಂ ಸಂಸ್ಥೆಯೊಂದು ಮಾಂಸಾಹಾರ, ಚಾಕೊಲೇಟ್ ಸೇರಿದಂತೆ ಹಲವು ಉತ್ಪನ್ನಗಳಿಗೆ ಹಲಾಲ್ ಪ್ರಮಾಣ ಪತ್ರ ನೀಡುತ್ತಿದೆ. ಇದಕ್ಕಾಗಿ ಒಂದು ವಸ್ತುವಿಗೆ ವರ್ಷಕ್ಕೆ ₹ 21,500 ಪಡೆಯಲಾಗುತ್ತಿದೆ. ಆ ಮೂಲಕ ಕೋಟ್ಯಂತರ ರೂಪಾಯಿ ಹಣ ಗಳಿಸುತ್ತಿದೆ. ಈ ಹಣ ದೇಶ ವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ ಎಂದು ಆರೋಪಿಸಿದರು.