News Kannada
Friday, March 31 2023

ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಸಚಿವ ಅಶ್ವಥ್ ನಾರಾಯಣ್ ವಜಾ: ಬಸವರಾಜ ರಾಯರೆಡ್ಡಿ ಆಗ್ರಹ

Hubballi: Basavaraj Rayareddy slams BJP for doing left-wing politics
Photo Credit : News Kannada

ಹುಬ್ಬಳ್ಳಿ: ಬಿಜೆಪಿಗೆ ಒಳ್ಳೆಯ ಸಂಸ್ಕೃತಿ ಗೊತ್ತಿಲ್ಲ. ಅವರು ವಾಮಮಾರ್ಗದ ರಾಜಕೀಯ ಮಾಡುವವರು. ಇತ್ತೀಚೆಗೆ  ಬಿಜೆಪಿ ಮುಖಂಡರು ಬಹಳ ಕೆಟ್ಟ ಭಾಷೆ ಬಳಸುತ್ತಿದ್ದಾರೆ. ಇದು ಗೂಂಡಾ ಮತ್ತು ಅಸಭ್ಯ ಸಂಸ್ಕೃತಿ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರನ್ನ ಮುಗಿಸೋದು ಅಂದ್ರೆ ಜೀವದಿಂದ ತೆಗಿರಿ ಎನ್ನುವ ಅರ್ಥ. ಇದು ಕ್ರಿಮಿನಲ್ ಮೈಂಡ್ ಹೊಂದಿರುವವರ ಹೇಳಿಕೆ.  ಅಶ್ವಥ್ ನಾರಾಯಣ್ ಮಂತ್ರಿಯಾಗುವಾಗ ದ್ವೇಷ ಮಾಡಲ್ಲ ಅಂತ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಈಗ ಅದನ್ನು ಮರೆತು ಮಾತನಾಡುತ್ತಿದ್ದಾರೆ. ಇದು ಯಾವ ನೈತಿಕತೆ ಎಂದು ಪ್ರಶ್ನಿಸಿದ್ರು.

ಇವರು ಜನರಿಗೆ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದ್ದಾರೆ. ಪ್ರಮಾಣ ವಚನ ಮರೆತವರು ಅವರ ಸ್ಥಾನಕ್ಕೆ ವಜಾ ಆಗಲು ಅರ್ಹರು. ಇದನ್ನು ರಾಜ್ಯಪಾಲರು ಗಮನಿಸಿ ಅವರನ್ನು ವಜಾ ಮಾಡಬೇಕು. ಸಿಎಂ ಬೊಮ್ಮಾಯಿಯವರು ಇದನ್ನು ಹೇಗೆ ನೋಡುತ್ತಿದ್ದಾರೆ. ಅವರೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಒಳ್ಳೆಯದು. ಇಲ್ಲದಿದ್ದರೆ ಅವರನ್ನ ವಜಾ ಮಾಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.

See also  ಬೇಲೂರು: ಹಲ್ಮಿಡಿ ಶಿಲಾ ಪ್ರತಿಕೃತಿ ಮಂಟಪಕ್ಕೆ ಶಿಲಾನ್ಯಾಸ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು