News Kannada
Friday, March 31 2023

ಹುಬ್ಬಳ್ಳಿ-ಧಾರವಾಡ

ನವಲಗುಂದ: ಸಾಮೂಹಿಕ ವಿವಾಹದಿಂದ ಅನಗತ್ಯವಾದ ದುಂದು ವೆಚ್ಚಗಳಿಗೆ ಕಡಿವಾಣ – ಕೆ.ಎನ್.ಗಡ್ಡಿ

Mass marriages will curb unnecessary extravagances- K N Gaddi
Photo Credit : News Kannada

ನವಲಗುಂದ: ಸಾಮೂಹಿಕ ವಿವಾಹಗಳನ್ನು ಮಾಡುವುದರಿಂದ ಅನಗತ್ಯವಾದ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬಹುದು ಎಂದು ಮಾಜಿ ಸಚಿವ ಕೆ.ಎನ್.ಗಡ್ಡಿ ಅಭಿಪ್ರಾಯಪಟ್ಟರು.

ಸಮಾಜಿ ಸೇವೆ, ಜನಪರ ನಾಡಿಮಿಡತಕ್ಕಾಗಿ ಶ್ರಮಿಸಿದ ದಿ ಸಿದ್ಧಲಿಂಗಪ್ಪ (ಅಣ್ಣಪ್ಪ) ಸಹೋದರ ದಿ ಮಹಾಂತಪ್ಪ ವೀರಪ್ಪ ಜಿನಗಾ ಇವರ ಸ್ಮರಣಾರ್ಥ ಅಂಗವಾಗಿ ನಗರ ಜವಳಿ ಪೇಟೆಯಲ್ಲಿ ನೆಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಇಂದು ಕೋವೀಡ್ ನಂತರ ಆರ್ಥಿಕ ಪರಿಸ್ಥಿತಿ ಸರಿಯಲ್ಲ ಕಾರಣ ಇಂತಹ ಸಾಮೂಹಿಕ ವಿವಾಹಗಳನ್ನು ಆಯೋಜನೆ ಮಾಡಿದ್ದು ಒಳ್ಳೆಯ ವಿಚಾರ ಎಂದರು. ನವ ಜೋಡಿಗಳು ಇಂದು ಹೊಸ ಜೀವನದ ಪ್ರಯಾಣ ಸುಖಕರವಾಗಲಿ ನೂರುಕಾಲ ಬಾಳಲಿ ಎಂದರು.

ಸಾನಿಧ್ಯವಹಿಸಿ ಮಾತನಾಡಿದ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು ನವ ಜೋಡಿಗಳ ಬದಕು ಹರುಷ ತರಲಿ, ಬಾಳಿನಲ್ಲಿ ಸಂಶಯ ಎಂಬ ಪದ ದೂರ ಇಟ್ಟು ತವರು ಮನೆ ಹೆಸರು ತರವ ಕಾರ್ಯ ಮಾಡಿ ಎಂದು ನವ ವಧುಗಳಿಗೆ ಕಿವಿಮಾತು ಹೇಳಿದರು. ಸತೀಶ್ ಜಿನಗಾ ಕುಟುಂಬದ ಕಾರ್ಯ ಶ್ಲಾಘನೀಯ. ಇನ್ನು ಹೆಚ್ಚು ಸಮಾಜಿಕ ಸೇವೆಗಳನ್ನು ಮಾಡುವ ಶಕ್ತಿ ಕೊಡಲಿ ಎಂದರು.

ದಿವ್ಯ ಸಾನಿಧ್ಯ ಹಿರೇಮಠದ ಸಿದ್ದೇಶ್ವರ ಮಹಾಸ್ವಾಮಿಜಿಗಳು, ರಾಮದುರ್ಗದ ಶಾಂತವೀರ ಮಹಾಸ್ವಾಮಿಗಳು, ನಾಗಲಿಂಗ ಸ್ವಾಮಿ ಮಠದ ವಿರೇಂದ್ರ ಮಹಾಸ್ವಾಮಿಗಳು, ಹಾವನೂರ ದಳವಾಯಿಮಠದ ಶಿವಕುಮಾರ ಮಹಾಸ್ವಾಮಿಗಳು ಸಾನುಧ್ಯವಹಿಸಿ ಮಾತನಾಡಿದರು.

ಪತ್ರಿಕೆ ಹಂಚುವ ಪ್ರತಿಭಾವಂತ ವಿದ್ಯಾರ್ಥಿ ಸಂಜು ಗುರಿಕಾರ ೧೦ ಸಾವಿರದ ಚಕ್ ನ್ನು ಸತೀಶ್ ಹಾಗೂ ಮಾಂತೇಶ ಜಿನಗಾ ವಿತರಿಸಿದರು. ಸಮಾಜದ ಸೇವೆ ಮಾಡಿದ ಗಣ್ಯರಾದ ಎಸ್ ಎಮ್ ಪಟ್ಟಣಶೆಟ್ಟಿ, ಅಣ್ಣಪ್ಪ ಬಾಗಿ, ಬಸಪ್ಪ ಬೆಂಡಿಗೇರಿ, ನಿಂಗಪ್ಪ ಚವಡಿ, ವಿಜಯಕಮಾರ ಅತಗೂರ, ಸನ್ಮಾನಿಸಲಾಯಿತು. ಗುರುವಂದನಾ ಸಮಿತಿಯಿಂದ ಮಾತಶ್ರೀ ಪಾರ್ವತಿ ಜಿನಗಾ ಮಕ್ಕಳಾದ ಸತೀಶ್ ಹಾಗೂ ಮಾಂತೇಶ ಅವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಸಂಗು ಜಿನಗಾ, ಪ್ರಕಾಶ ಸಿಗ್ಗಿ, ಚಿನ್ನಪ್ಪ ಕೆಸರಪ್ಪನವರ, ಫಕ್ಕಿರೇಶ ಹೂಗಾರ, ಶಿವಕುಮಾರ ಹಿರೇಮಠ, ಸೌಕತ್ ಕಲಾರಿ, ಈರಣ್ಣ ಚವಡಿ, ಅಜಯ್ ಜಿನಗಾ, ಸುನೀಲ ದೋಂಗಡೆ, ಮಂಜು ಅರಕೇರಿ ಉಸ್ಮಾನ ಬಬರ್ಚಿ, ಜಯಾ ಜಿನಗಾ, ಎ.ಬಿ ಕೊಪ್ಪದ, ಗಣೇಶ ಹೋಳೆಯಣ್ಣವರ, ಮಾಂತೇಶ ನಾಗಾವಿ, ಅನೀಲ ಶಿದ್ರಾಮಶೆಟ್ಟರ, ಮಹಿಳಾ ಕಲ್ಯಾಣ ಇಲಾಖೆಯ ಶಂಕ್ರಮ್ಮ ಹಿರೇಮಠ, ಮಂಜುಳಾ ಒಂಟೇಲಿ, ಭಾಗವಹಿಸಿದ್ದರು.

See also  ಕಾಂಗ್ರೆಸ್ ಅನವಶ್ಯಕ ವಿಚಾರ ಇಟ್ಟುಕೊಂಡು ರಾತ್ರಿಯಿಡಿ ಧರಣಿ ಮಾಡುತ್ತಿದ್ದಾರೆ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು