News Kannada
Saturday, April 01 2023

ಹುಬ್ಬಳ್ಳಿ-ಧಾರವಾಡ

ಕಲಘಟಗಿ: ಪತ್ರಕರ್ತರ ಕ್ಷಮೆಯಾಚಿಸಿದ ಇನ್ಸ್ಪೆಕ್ಟರ್

Inspector apologises to journalists
Photo Credit : News Kannada

ಕಲಘಟಗಿ: ಹುಬ್ಬಳ್ಳಿಯ tv9 ವಾಹಿನಿಯ ವರದಿಗಾರ ಶಿವು ಪತ್ತಾರ ಅವರ ಮೇಲೆ ಕಲಘಟಗಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದರ್ಪ ಮರೆದ ಘಟನೆಗೆ ಸಂಬಂಧಿಸಿದಂತೆ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಘಟನೆಯನ್ನು ಖಂಡಿಸುತ್ತಿದ್ದಂತೆ. ಕಲಘಟಗಿ ಇನ್ಸ್ಪೆಕ್ಟರ್ ಎಸ್.ಎಸ್.ಕೌಜಲಗಿ ಅವರು ತಾವು ಮಾಡಿದ ತಪ್ಪನ್ನು ಒಪ್ಪಿ ಕ್ಷಮೆಯಾಚನೆ ಮಾಡಿದರು.

ಅಲ್ಲದೇ ಇನ್ಮೇಲೆ ಈ ತರಹದ ಘಟನೆಯನ್ನು ಮರುಕಳಿಸದಂತೆ ನೋಡಿಕೊಳ್ಳುವೆ ಎಂದು ತಿಳಿಸಿದ್ದು, ಅಷ್ಟಾಗ್ಯೂ ಪತ್ರಕರ್ತರು ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಈ ವೇಳೆ ಹಿರಿಯ ಪೋಲಿಸ್ ಅಧಿಕಾರಿಗಳು ಚುನಾವಣೆ ಸಭೆಯಲ್ಲಿದ್ದ ಕಾರಣ ಎರಡು ದಿನಗಳ ಒಳಗಾಗಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.

ಈ ಹಿನ್ನೆಲೆಯಲ್ಲಿ ನಮ್ಮ ಸಹೋದ್ಯೋಗಿ ಪತ್ರಕರ್ತನ ಮೇಲೆ ದೌರ್ಜನ್ಯ ಮಾಡಿದ ಅಧಿಕಾರಿ ಕ್ಷಮೆಯಾಚನೆ ಮಾಡಿದ್ದು, ಹೀಗಾಗಿ ಪ್ರತಿಭಟನೆಯನ್ನು ಮೊಟಕುಗೊಳಿಸಲಾಗಿದೆ.

See also  ಹುಬ್ಬಳ್ಳಿ: ಪೇಶ್ವೆ ಡಿಎನ್‌ಎ ಹೇಳಿಕೆಗೆ ಈಗಲೂ ಬದ್ದ ಎಂದ ಹೆಚ್.ಡಿ.ಕುಮಾರಸ್ವಾಮಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು