News Kannada
Friday, June 09 2023
ಹುಬ್ಬಳ್ಳಿ-ಧಾರವಾಡ

ಧಾರವಾಡ: ವಿಭಿನ್ನವಾಗಿ ಪ್ರತಿಭಟನೆ ಮಾಡಿದ ಹೆಬ್ಬಳ್ಳಿ ಗ್ರಾಮಸ್ಥರು

Hebballi villagers protest differently
Photo Credit : News Kannada

ಧಾರವಾಡ: ತಮ್ಮ ವಾರ್ಡಿಗೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗದೇ ಇರುವುದರಿಂದ ರೋಸಿ ಹೋದ ಜನ ಗ್ರಾಮ ಪಂಚಾಯ್ತಿಗೆ ಎತ್ತುಗಳನ್ನು ನುಗ್ಗಿಸಿ ಪ್ರತಿಭಟನೆ ನಡೆಸಿದ ಪ್ರಸಂಗ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ಹೆಬ್ಬಳ್ಳಿ ಗ್ರಾಮದ ಏಳನೇ ವಾರ್ಡಿನಲ್ಲಿ ಕಳೆದ 17 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ. ಈ ಸಂಬಂಧ ಪಂಚಾಯ್ತಿಗೆ ತಮ್ಮ ಅಳಲು ಹೇಳಿಕೊಳ್ಳಲು ಹೋದಾಗ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ತನ್ವಿರ್ ಎಂಬುವವರು, ಈ ಸಮಸ್ಯೆ ನಮಗೆ ಸಂಬಂಧವಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದರಿಂದ ಕಂಗಾಲಾದ ಜನ ಪಿಡಿಓ ಅವರನ್ನೇ ಹೊರಗೆ ಹಾಕಿ ಪಂಚಾಯ್ತಿಗೆ ಬೀಗವನ್ನೂ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ, ಪಂಚಾಯ್ತಿ ಆವರಣದಲ್ಲಿ ಎತ್ತುಗಳನ್ನು ಕಟ್ಟಿ, ಸೋಮವಾರ ಆಗಿದ್ದರಿಂದ ಅಲ್ಲೇ ಎತ್ತುಗಳ ಮೈ ತೊಳೆದಿದ್ದಾರೆ. ಅಲ್ಲದೇ ಅಲ್ಲೇ ಅವುಗಳಿಗೆ ಮೇವು ಹಾಕಿ ಆ ಮೂಲಕ ಪಿಡಿಓ ಅವರ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

See also  ಜ.29ರಂದು ನಗರಕ್ಕೆ ಸಿಎಂ ಆಗಮನ ಹಿನ್ನೆಲೆ, ನಗರದಲ್ಲಿ ಪಾಳು ಬಿದ್ದ ಪ್ರವಾಸಿ ಮಂದಿರಕ್ಕೆ ಕಾಯಕಲ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು