News Kannada
Thursday, June 01 2023
ಹುಬ್ಬಳ್ಳಿ-ಧಾರವಾಡ

ಧಾರವಾಡ: ಸದಾಶಿವ ಆಯೋಗದ ವರದಿ ವಿರುದ್ಧ ಪ್ರತಿಭಟನೆ

Dharwad: Protests against Sadashiva Commission report
Photo Credit : News Kannada

ಧಾರವಾಡ: ಸರ್ಕಾರ ಜಾರಿಗೊಳಿಸಿರುವ ಸದಾಶಿವ ಆಯೋಗದ ವರದಿ ತಮಗೆ ತೃಪ್ತಿ ತಂದಿಲ್ಲ. ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ಡೋಹರ ಕಕ್ಕಯ್ಯ ಸಮಾಜದ ಮುಖಂಡರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸದಾಶಿವ ಆಯೋಗ ವರದಿ ಜಾರಿಯಲ್ಲಿ ತಮ್ಮ ಸಮಾಜಕ್ಕೆ ಅನ್ಯಾಯವಾಗಿದೆ. ಈ ವರದಿ ಜಾರಿಯಿಂದಾಗಿ ತಮ್ಮ ಸಮಾಜಕ್ಕೆ ಸಿಗಬೇಕಿದ್ದ ಶೇ.6 ರಷ್ಟು ಮೀಸಲಾತಿ ಕೇವಲ ಶೇ.1 ರಷ್ಟು ಮಾತ್ರ ಸಿಗಲಿದೆ. ನಾವು ಕೂಡ ಈ ವರದಿ ಜಾರಿಯಾಗಲಿ ಎಂದು ಕಾಯುತ್ತಿದ್ದೆವು. ಆದರೆ, ಸರ್ಕಾರ ವರದಿ ಜಾರಿ ಮಾಡುವಲ್ಲಿ ಲೋಪವೆಸಗಿದೆ.

ಜನಗಣತಿ ಆಧಾರದ ಮೇಲೆ ನಮ್ಮ ಸಮಾಜಕ್ಕೆ ಶೇ. 1 ರಷ್ಟು ಮಾತ್ರ ಮೀಸಲಾತಿ ನೀಡಲಾಗಿದೆ. ನಮ್ಮ ಸಮಾಜ ಅಸ್ಪೃಶ್ಯರಲ್ಲಿ ಬರುತ್ತದೆ. ಆ ಆಧಾರದ ಮೇಲೆ ನಮಗೆ ಮೀಸಲಾತಿ ಸಿಗಬೇಕಿತ್ತು. ಈ ವರದಿ ಜಾರಿಯಲ್ಲಿ ಆಗಿರುವ ಲೋಪದಿಂದಾಗಿ ನಮ್ಮ ಸಮಾಜ ಚುನಾವಣೆ ಬಹಿಷ್ಕರಿಸಲಿದೆ. ರಾಜ್ಯದಾದ್ಯಂತ ನಮ್ಮ ಸಮಾಜ ಯಾವುದೇ ಪಕ್ಷಕ್ಕೆ ಬೆಂಬಲ ನೀಡದೇ ಚುನಾವಣೆ ಬಹಿಷ್ಕರಿಸಲಿದೆ.

ನಮ್ಮ ಸಮಾಜವನ್ನು ಹಿಂದೂ ಡೋಹರ ಎಂದು ಬರೆಯಬೇಕು. ಆದರೆ, ದ್ರಾವಿಡರು ಎಂದು ಬರೆಯಲಾಗುತಿದೆ. ಆದರಿಂದ ಚುನಾವಣೆ ಒಳಗಾಗಿಯೇ ಈ ಸಮಸ್ಯೆಗೆ ಸ್ಪಷ್ಟಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

See also  ಧಾರವಾಡ: ಅವಳಿನಗರದಲ್ಲಿ ಅನಧಿಕೃತ ಲೇಔಟ್ ತೆರವು ಕಾರ್ಯಾಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು