ಹುಬ್ಬಳ್ಳಿ: ಪ್ರಚಾರಕ್ಕೆ ಜನರಿಂದ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ. ಸಂಸ್ಥೆಗಳನ್ನು ಬ್ಯಾನ್ ಮಾಡುವ ಹಕ್ಕು ಕೇಂದ್ರ ಸರ್ಕಾರಕ್ಕೆ ಇದೆ ಹೊರತು ರಾಜ್ಯ ಸರ್ಕಾರಕ್ಕೆ ಇಲ್ಲಾ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿಯನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡುವುದಿಲ್ಲಾ ಎಂದು ಬರೆದು ಕೊಟ್ಟಿದ್ದಾರೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಎಲ್ಲರಿಗೂ ಪ್ರತಿಕ್ರಿಯೆ ನಾನು ಕೊಡುವುದಿಲ್ಲಾ. ಅದು ಅವರ ಅಭಿಪ್ರಾಯ. ನಾನು ಯಾಕೆ ಬಿಜೆಪಿ ತೊರೆದು ಎನ್ನುವುದು ಹೇಳಿದ್ದೇನೆ. ಮತ್ತೇ ಹೇಳುವುದಿಲ್ಲಾ ಎಂದರು.