ಹುಬ್ಬಳ್ಳಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾಯಿಪಲ್ಲೆ ವ್ಯಾಪಾರಸ್ಥರೊಂದಿಗೆ ಪ್ರಚಾರ ಸಭೆ ನಡೆಸಿ, ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಮಹೇಶ ಟೆಂಗಿನಕಾಯಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ, ರಾಜಣ್ಣ ಕೊರವಿ, ಚನ್ನು ಹೊಸಮನಿ, ಪೂರ್ವ ಕ್ಷೇತ್ರದ ಅಭ್ಯರ್ಥಿಗಳಾದ ಡಾ. ಕ್ರಾಂತಿ ಕಿರಣ, ಪ್ರಮುಖರಾದ ಚಂದ್ರಶೇಖರ ಗೋಕಾಕ, ಅಷ್ಟಾಕ್ ಬಿಜಾಪುರಿ, ಸಂಶುದ್ದೀನ್ ಧಾರವಾಡ, ದಾವಲಸಾಬ್ ಧಾರವಾಡ, ಬಸವರಾಜ ಯಕಲಾಸಪೂರ, ಮೌಲಾಸಾಬ್ ಮುಲ್ಲಾ ಹಾಗೂ ಇತರರು ಉಪಸ್ಥಿತರಿದ್ದರು.