News Karnataka Kannada
Thursday, April 25 2024
ಹುಬ್ಬಳ್ಳಿ-ಧಾರವಾಡ

ಧಾರವಾಡ: ಚಿಕ್ಕನಗೌಡ್ರ ಗೆ ಪಕ್ಷೇತರ ಅಭ್ಯರ್ಥಿಗಳ ಬಲ, ಎಮ್ ಆರ್ ಕರಡಿ ಸಾಥ್

Chikkagowda has the strength of independent candidates, M R Karadi saath
Photo Credit : News Kannada

ಧಾರವಾಡ: ಕುಂದಗೋಳ ವಿಧಾನಸಭಾ ಕ್ಷೇತ್ರದ 70 ಪಕ್ಷೇತರ ಅಭ್ಯರ್ಥಿಯಾದ ಮಹಮ್ಮದ ಹನೀಫ ರಾಜೇಸಾಬ ಕರಡಿ ಅವರು ಚುನಾವಣಾ ಕಣದಿಂದ ಹಿಂದೆ ಸರಿದು ಮಾಜಿ ಶಾಸಕರಾದ ಎಸ್ ಐ ಚಿಕ್ಕನಗೌಡ್ರ ಪರವಾಗಿ ಚುನಾವಣೆ ಪ್ರಚಾರ ನಡೆಸಲು ನಿರ್ಧಾರ ಮಾಡಿರುವುದಾಗಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡಿಸಿ ಮಾತನಾಡಿದ ಅವರು, ಎಮ್‌ ಆರ್ ಕರಡಿ ಈ ಹಿಂದೆ ನಡೆದ‌ ಚುನಾವಣೆಯಲ್ಲಿ ನಮ್ಮ ಸಮಾಜ ಹಾಗೂ ನನ್ನ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದೆವು . ನಾವು ಚಿಕ್ಕನಗೌಡ್ರ ಅವರಿಗೆ ಬೆಂಬಲಿಸಲು ನಿರ್ಧಾರ ಮಾಡಿದ್ದೆವೆ. ಈ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾದ ಎಸ್ ಆಯ್ ಚಿಕ್ಕನಗೌಡ್ರ ಅವರು ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದ್ದಾರೆ.

ಇನ್ನು ಕುಂದಗೋಳ ಕ್ಷೇತ್ರದಲ್ಲಿ ನಾನು ಪಕ್ಷೇತರ ಅಭ್ಯರ್ಥಿ ಆದ ಚಿಕ್ಕನಗೌಡ್ರ ಪರವಾಗಿ ಇಂದಿನಿಂದ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿ ಕ್ಷೇತ್ರದ ಪ್ರತಿ ಗ್ರಾಮಕ್ಕೆ ಭೇಟಿಯಾಗಿ ಚಿಕ್ಕನಗೌಡ್ರ ಗೆಲವಿಗೆ ಶ್ರಮಿಸುವೆ ಎಂದರು.

ಬಿಜೆಪಿಯ ಕೋಮು ದ್ವೇಷದ ರಾಜಕಾರಣ ಹಾಗೂ ಕಾಂಗ್ರೆಸ್ ನ ತಾತ್ಸಾರ ನೀತಿಯಿಂದ ಅಲ್ಪಸಂಖ್ಯಾತರ ಮತಗಳು ಈ ಭಾರಿ ಚಿಕ್ಕನಗೌಡ್ರ ಅವರಿಗೆ ಬೆಂಬಲಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೊಷ್ಠಿಯಲ್ಲಿ ಅಲ್ಪಸಂಖ್ಯಾತ ನಾಯಕ ಸಮುದಾಯದ ನಾಯಕರು‌ ಅಬ್ದುಲ್ ಸಾಬ ನಾಯ್ಕರ್ ಮುಲ್ಲಾ , ಶಿದ್ದಣ್ಣ ಹೊಳಿ,  ಶೆಂಕರಗೌಡ್ರ, ಲಾಲಸಾಬ ಸುಂಕದ .ಬಿ ಎಚ್ ಬಂದಗಿ ಉಪಸ್ಥಿತ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು