News Karnataka Kannada
Friday, April 26 2024
ಹುಬ್ಬಳ್ಳಿ-ಧಾರವಾಡ

ಧಾರವಾಡ: ಭರ್ಜರಿ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಸಂತೋಷ ಲಾಡ್

Dharwad: Congress candidate Santosh Lad campaigned extensively
Photo Credit : News Kannada

ಧಾರವಾಡ : ತಾಲೂಕಿನ ಗಂಭ್ಯಾಪುರ ಗ್ರಾಮದಲ್ಲಿ ಯುವಕರೊಂದಿಗೆ ಬೈಕ್ ರಾಲಿ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸಂತೋಷ ಲಾಡ್ ಮತಯಾಚಿಸಿದರು.

ನಂತರ ಮಾತನಾಡಿದ ಅವರು, ನಾನು ಕೂಡ ಬೈಕ್ ಚಲಾಯಿಸುವಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ತಮ್ಮಬಾಲ್ಯದಲ್ಲಿ ಬೈಕ್‌ಗಳ ಮೂಲಕ ಪ್ರಯಾಣ ಮಾಡುತ್ತಿದ್ದ ಘಟನೆಗಳನ್ನು ಯುವಕರೊಂದಿಗೆ ಹಂಚಿಕೊಂಡರು.ಯುವಕರೊಂದಿಗೆ ಮಾತನಾಡುತ್ತ ನಿತ್ಯದಲ್ಲಿ ಆಟ ವ್ಯಾಯಮಗಳ ಮೂಖಾಂತರ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಿ ಎಂದು ಹೇಳುವುದರ ಮೂಲಕ ತಮಗೆ ಮತ ನೀಡುವಂತೆ ಮನವೊಲಿಸಿದರು.

ಕ್ಷೇತ್ರದ ಅಭಿವೃದ್ಧಿ ಯುವಕರ ಮೇಲೆ ನಿಂತಿದ್ದು,ಯುವಕರು ಮನಸ್ಸು ಮಾಡಿದಲ್ಲಿ ಬದಲಾವಣೆ ಮಾಡಲು ಸಾಧ್ಯ ಸಂವಿಧಾನ, ಸಮಾಜದ ರಕ್ಷಣೆ ಮಾಡುವಂತ ವ್ಯಕ್ತಿಗಳಿಗೆ ಬೆಂಬಲಿಸಿ ಕೋಮಗಲಭೆ, ಮತಿಯ ಗಲಭೆ ಇನ್ನಿತರ ಗಲಭೆಗಳನ್ನು ಪ್ರೇರೇಪಿಸುವ ದೂರವಿದು ಸಮಾಜದಲ್ಲಿ ಶಾಂತಿ ಕದಡದೆಸರ್ಕಾರ ನಡೆಸುವ ಪಕ್ಷಕ್ಕೆ ಮತಚಲಾಯಿಸಿ ಎಂದರು.

ಗ್ರಾಮಕ್ಕೆ ಆಗಮಿಸುತ್ತಿದಂತೆ ಗ್ರಾಮಸ್ಥರು ಹೂ ತೋರಿ ಸ್ವಾಗತಿಸಿದರು. ಮಹಿಳೆಯರು ತಿಲಕವಿಟ್ಟು ಆರತಿ ಬೆಳಗಿದರು. ವಿವಿಧ ಜನಪದ ಕಲಾಮೇಳಗಳ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು.

ಈ ವೇಳೆ ಸಂತೋಷ ಲಾಡ್ ಮನೆ ಮನೆಗೆ ತೆರಳಿ ಕಾಂಗ್ರೆಸ್‌ಗೆ ಮತ ನೀಡುವಂತೆ ಮನವಿ ಮಾಡಿದರು. ಮುಖಂಡರಾದ ಗುರು ಬೆಂಗೇರಿ, ಮಲ್ಲಕಾರ್ಜುನ ಚಿಕ್ಕಮಠ, ನಾಗರಾಜ ಮಾಳಗಿ, ಹನಮಂತ ಕಾಳೆ,ಬಸಪ್ಪ ಮಾಳಗಿ, ಫಕ್ಕಿರಪ್ಪ ದೊಡ್ಡನಿಂಗಪ್ಪನವರ, ಈಶ್ವರ ರೊಟ್ಟಿ, ಮಹಾದೇವಪ್ಪ ಬೆಂಗೇರಿ, ನಿಂಗಪ್ಪ ಅಮರಗೋಳ, ಶಂಕ್ರಪ್ಪ ಬೆಂಗೇರಿ, ವಿರಭದ್ರಯ್ಯ ಚಿಕ್ಕಮಠ, ಬಸವಣ್ಣೆಪ್ಪ ತೋಪಲಗಟ್ಟಿ, ಬಸಪ್ಪರೊಟ್ಟಿ, ಪ್ರವೀಣ ಬೆಂಗೇರಿ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು