ಕುಂದಗೋಳ: ಮತಕ್ಷೇತ್ರದ ದೇವರಗುಡಿಹಾಳ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್’ನಿಂದ ಮನೆಯೊಂದು ಆಹುತಿಯಾಗಿದ್ದು, ಎರಡು ಜಾನುವಾರುಗಳು ಬೆಂಕಿಗೆ ಆಹುತಿಯಾಗಿವೆ.
ದೇವರಗುಡಿಹಾಳ ಗ್ರಾಮದ ಹಣಮಂತ ಶಿವಪ್ಪ ಗಾರಗೆ ಎಂಬುವರ ಮನೆ ಬೆಂಕಿಗೆ ಆಹುತಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂ.ಆರ್.ಪಾಟೀಲ್ ಸರ್ಕಾರದಿಂದ ಅಗತ್ಯ ಪರಿಹಾರದ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕುಟುಂಬಸ್ಥರು ಉಪಸ್ಥಿತರಿದ್ದರು. ಶಾರ್ಟ್ ಸರ್ಕ್ಯೂಟ್ ಆಘಾತಕ್ಕೆ ಒಳಗಾದ ಕುಟುಂಬದವರಿಗೆ ಸಾಂತ್ವನ ಜೊತೆ ಶಾಸಕರಿಂದ ಪರಿಹಾರದ ಭರವಸೆ ಸಿಕ್ಕಿದೆ.