ಹುಬ್ಬಳ್ಳಿ: ಇಡೀ ವರ್ಷವಿಡಿ ಬೆಳೆದ ಬಾಳೆ ಗಿಡಗಳು ಬಿರುಗಾಳಿ ರಭಸಕ್ಕೆ ನೆಲಸಮವಾದ ಘಟನೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ.
500 ಬಾಳೆ ಗಿಡಗಳು ನೆಲಕಚ್ಚಿ ಅಂದಾಜು 5 ಲಕ್ಷ ರೂ.ದಷ್ಟು ಹಾನಿಯಾಗಿವೆ. ರೈತ ಅಪ್ಪಯ್ಯ ವಸ್ತ್ರದ ಎಂಬುವರ ಹೊಲದಲ್ಲಿ ಸಂಜೆಹೊತ್ತಿಗೆ ಬೀಸಿದ ಬಿರುಗಾಳಿ ಹೊಡೆತಕ್ಕೆ ಬಾಳೆಗಿಡಗಳು ಸಂಪೂರ್ಣ ನಾಶವಾಗಿ ನೆಲಸಮವಾಗಿ ಬಿಟ್ಟಿವೆ. ಸುಮಾರು ಒಂದೂವರೆ ಎಕ್ರೆ ಬಾಳೆಬೆಳೆ ನೆಲ ಕಚ್ಚಿಕೊಂಡು ಬಿಟ್ಟಿದೆ. ವರ್ಷವಿಡೀ ಲಕ್ಷ ರೂಪಾಯಿ ಖರ್ಚು ಮಾಡಿ ಬೆಳೆಸಿದ ಬಾಳೆ ಬೆಳೆಯೂ ಇನ್ನೇನು ವಾರ ಕಳೆಯುವಷ್ಟರಲ್ಲಿಯೇ ಕಟಾವ್ ಆಗಿ ಮಾಡಿದ ಸಾಲ ಹರಿಯುತ್ತೆ ಎಂಬ ನಿರೀಕ್ಷೆಯಲ್ಲಿದ್ದ ರೈತನ ಬದುಕಿಗೆ, ಒಂದೇ ದಿನದಲ್ಲಿ ಬಿರುಗಾಳಿ ಭೂತ ಮುಳ್ಳಾಗಿ ಬಂದು ರೈತನ ಬದುಕನ್ನೇ ಕಿತ್ತುಕೊಂಡಿದೆ.