ಹುಬ್ಬಳ್ಳಿ: ಇವತ್ತು ಕರ್ನಾಟಕ ವಿಧಾನಸಭೆ ಫಲಿತಾಂಶದ ದಿನ. ಫಲಿತಾಂಶದ ಬಹಳ ಪ್ರಮುಖ ದಿನ . ರಾಜ್ಯದ ಜನರ ದೃಷ್ಟಿಯಿಂದ, ಅಭಿವೃದ್ಧಿ ದೃಷ್ಟಿಯಿಂದ ಫಲಿತಾಂಶ ಬಹಳ ಪ್ರಮುಖವಾಗಿದೆ ಎಂದು ಸಿಎಮ್ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸಂಪೂರ್ಣ ಬಹುಮತ ಬರೋ ವಿಶ್ವಾಸ ಇದೆ.
ಕೆಲವೇ ಗಂಟೆಗಳಲ್ಲಿ ಹಲವಾರು ಟ್ರೆಂಡ್ ಗೊತ್ತಾಗಿಲಿದೆ.ನಾಲ್ಕೈದು ಗಂಟೆಗಳಲ್ಲಿ ಹೆಚ್ಚು ಕಡಿಮೆ ಫಲಿತಾಂಶ ಯಾವ ದಿಕ್ಕಿನಲ್ಲಿ ಇರತ್ತೆ ಅನ್ನೋದ ಗೊತ್ತಾಗಲಿದೆ. ಪೈಪೋಟಿ ಇದ್ರೂ, ಅತ್ಯಂತ ಶಾಂತಿ ಸುವ್ಯವಸ್ಥೆಯಿಂದ ಮತದಾನ ಮಾಡಿದ್ದಾರೆ ಎಂದರು.