ಹುಬ್ಬಳ್ಳಿ: ಸಿದ್ಧರಾಮಯ್ಯ ಸಿಎಂ ಆಗುತ್ತಿರುವುದು ಶಿವಕುಮಾರ್ ಡಿಸಿಎಂ ಆಗುತ್ತಿರುವುದು ಸ್ವಾಗತಾರ್ಹ. ಆದರೆ ಲಿಂಗಾಯತರನ್ನು ಕಡೆಗಣಿಸುವ ಕಾರ್ಯಕ್ಕೆ ಕಾಂಗ್ರೆಸ್ ಮುಂದಾಗಬಾರದು. ಈ ಚುನಾವಣೆಯಲ್ಲಿ ಲಿಂಗಾಯತ ಹಾಗೂ ಎಸ್.ಸಿ ಎಸ್.ಟಿ ಸಮುದಾಯದ ಕೊಡುಗೆಯನ್ನು ಸ್ಮರಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಮಹಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಮಾದಾರ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ ಸಲ ಲಿಂಗಾಯತರಿಗೆ ಅಧಿಕಾರ ಸಿಕ್ಕಿದೆ ಎಂದು ಸಮುದಾಯದ 37 ಜನರನ್ನು ಚುನಾಯಿತರಾಗಿದ್ದರು. ಈ ಸಲ ಅದು ಕಾಂಗ್ರೆಸ್ ಪರವಾಗಿದೆ. ಶಾಸಕರಲ್ಲಿ ಹೆಚ್ಚಿನ ಮಂದಿ ಲಿಂಗಾಯತರು. 27 ಜನರು ಪರಿಶಿಷ್ಟ ಸಮುದಾಯದವರು. ಹೀಗಿದ್ದರೂ, ಡಿಸಿಎಂ ಹುದ್ದೆ ಒಂದೇ ಯಾಕೆ ಇದೆ..? ಲಿಂಗಾಯತರು, ಪರಿಶಿಷ್ಟರು ಹಾಗೂ ಮುಸಲ್ಮಾನರನ್ನು ಸಹ ಪರಿಗಣಿಸಬಹುದಿತ್ತಲ್ಲವೆ. ಕಾಂಗ್ರೆಸ್ ಈ ಬಗ್ಗೆ ಗಮನ ಹರಿಸಬೇಕಾಗಿತ್ತು.ಇಲ್ಲದಿದ್ದರೆ, ಅದರ ಪರಿಣಾಮವನ್ನು ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದರು.
ಮುಂದೆ ಲೋಕಸಭಾ ಚುನಾವಣೆ ಸಹ ಬರಲಿದೆ. ಸಚಿವ ಸಂಪುಟ ಹೇಗಿರಲಿದೆ ಎಂದು ಕಾಯುತ್ತಿದ್ದೇವೆ. ಬಿಎಸ್ ವೈ, ಶೆಟ್ಟರ್ ಅವರನ್ನು ಬಿಜೆಪಿ ಮತ್ತು ಆರೆಸ್ಸೆಸ್ ನಡೆಸಿಕೊಂಡ ರೀತಿ ಹೇಗಿದೆ ಎಂದು ಗೊತ್ತಿದೆ. ಲಿಂಗಾಯತ ಸಂಘಟನೆಗಳ ಎಲ್ಲಾ ಸಮುದಾಯದ ಸ್ವಾಮೀಜಿಗಳ ಬೆಂಬಲ ನನಗಿದೆ ಎಂದು ಡಿಕೆಶಿ ಹೇಳಿದ್ದಾರೆ.
ಅದು ಲಿಂಗಾಯತರಲ್ಲ, ಬದಲಿಗೆ, ವೀರಶೈವರು. ಪಂಚಪೀಠಗಳ ನಾಲ್ಕು ಸ್ವಾಮಿಗಳು. ಹಿಂದೆ ಧರ್ಮ ಒಡೆದರು ಎಂದು ಬೊಬ್ಬೆ ಇಟ್ಟವರು ವೀರಶೈವರು. ಇದೇ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಬಿದ್ದು ಹೋಯಿತು. ನಂತರ ಶಿವಕುಮಾರ ಕ್ಷಮೆ ಕೋರಿದ್ದರು. ನಾಲ್ಕು ಸ್ವಾಮಿಗಳ ಬೆಂಬಲ ಇದೆ ಎಂದು, ಇಡೀ ಲಿಂಗಾಯತ ಸಮುದಾಯ ನನ್ನ ಬೆಂಬಲಕ್ಕಿದೆ ಎಂದು ಡಿಕೆಶಿ ಹೇಳುತ್ತಿದ್ದಾರೆ ಇದು ಸತ್ಯಕ್ಕೆ ದೂರವಾದ ಮಾತು ಎಂದು ಅವರು ಹೇಳಿದರು.