ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಿಂದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು, ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಕಾರವಾರ ರೋಡ್ ನಲ್ಲಿರುವ ಮೇಯರ್ ಮೆಮೋರಿಯಲ್ ಚರ್ಚ್ ಮಿಶನ್ ಕಾಂಪೌಂಡ್ನಲ್ಲಿ, ಫಾಸ್ಟರ್ ಕಮಿಟಿ ಹಾಗೂ ಪದಾದಿಕಾರಿಗಳ ವತಿಯಿಂದ ಕ್ರಿಶ್ಚಿಯನ್ ಬಾಂಧವರು ಸಭೆಯನ್ನು ಹಮ್ಮಿಕೊಂಡು ಜಗದೀಶ್ ಶೆಟ್ಟರ್ ಅವರಿಗೆ ಸನ್ಮಾನ ಮಾಡಿ ಗೌರವ ಸಲ್ಲಿಸಿದರು.
ಇನ್ನು ಕ್ರಿಶ್ಚಿಯನ್ ಧರ್ಮಗುರುಗಳಾದ ರೇವರೆಂಡ್ ರಾಜು, ಮತ್ತು ಅನಿಲ್ ಬುನಿಯನ್, ಉಜ್ವಲ ಗುಂಡಮಿ, ಎಡ್ವರ್ಡ್ ಬಳ್ಳಾರಿ ಹೀಗೆ ಕ್ರಿಶ್ಚಿಯನ್ ಧರ್ಮದ ಮುಖಂಡರು ಸೇರಿಕೊಂಡು ಪ್ರಾರ್ಥನೆ ಮಾಡಿ ಜಗದೀಶ್ ಶೆಟ್ಟರ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಭೆಯಲ್ಲಿ ನೂರಾರು ಕ್ರಿಶ್ಚಿಯನ್ ಬಾಂಧವರು ಭಾಗವಹಿಸಿದ್ದು, ಇವರೆಲ್ಲರನ್ನು ಉದ್ದೇಶಿಸಿ ಜಗದೀಶ್ ಶೆಟ್ಟರ್ ಅವರು ಮಾತನಾಡಿದರು.