ಕಲಘಟಗಿ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂತೋಷ ಲಾಡ್ ಈ ಬಾರಿ ಕ್ಷೇತ್ರದಲ್ಲಿ ಜಯಭೇರಿ ಗಳಿಸಿರುವ ಹಿನ್ನೆಲೆಯಲ್ಲಿ ಕಲಘಟಗಿ ಪಟ್ಟಣದ ಆಝಾದ್ ಮಲ್ಲಿಕನವರ ಎಂಬ ಯುವಕ ಸಂತೋಷ ಲಾಡ್ ಗೆದ್ದು ಬಂದರೆ ಪಾದಯಾತ್ರೆ ಮೂಲಕ ದೇವರ ದರ್ಶನ ಮಾಡುವುದಾಗಿ ದೇವರಲ್ಲಿ ಹರಕೆ ಹೊತ್ತಿದ್ದನಂತೆ.
ಈಗ ಲಾಡ್ ಗೆಲವು ಸಾಧಿಸಿದ್ದು ಇಂದು ಮುಂಜಾನೆ ಕಲಘಟಗಿ ಪಟ್ಟಣದ ರುಸ್ತುಂ ಶಾಹಿದ್ ದರ್ಗಾ ಮೂಲಕ 14 ಕಿಲೋಮೀಟರ್ ದೂರವಿರುವ ಸಾತೋಶಹೀದ ದರ್ಗಾ ವರೆಗೂ ಬರಿಗಾಲಲ್ಲಿ ಪಾದಯಾತ್ರೆ ಮಾಡಿ ದೇವರ ದರ್ಶನ ಮಾಡಿ ಹರಕೆ ತೀರಿಸಿದ್ದಾರೆ. ಕ್ಷೇತ್ರದಲ್ಲಿ ಸಂತೋಷ ಲಾಡ್ ರವರ ಅಭಿಮಾನಿಗಳ ಸಂಭ್ರಮಾಚರಣೆಯಲ್ಲಿ ಈ ಯುವಕನ ಹರಕೆ ವಿಶೇಷವಾಗಿದೆ.