ಕುಂದಗೋಳ: ಬಿ.ಜೆ.ಪಿ ಹಾಗೂ ಜೆ.ಡಿ.ಎಸ್ ಪಕ್ಷದಿಂದ ಬೇಸತ್ತು ಪಕ್ಷ ತೊರೆದು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಇಂದು ಕುಂದಗೋಳ ಮತಕ್ಷೇತ್ರದ ಶಾಸಕರಾದ ಕುಸುಮಾವತಿ ಶಿವಳ್ಳಿ ಇವರ ನೇತೃತ್ವದಲ್ಲಿ ಕುಂದಗೋಳ ಕ್ಷೇತ್ರದ ಹಿರೇಬುದಿಹಾಳ ಗ್ರಾಮದ ಹಿರಿಯ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಅವರೆಲ್ಲರನ್ನು ಪಕ್ಷದ ಶಾಲನ್ನು ಹೊದಿಸಿ ಅನ್ವರಾಸಾಬ ನದಾಫ್, ಜಗದೇವಪ್ಪ, ಮಲ್ಲೇಶ ಸೋಮಣ್ಣವರ , ಮಲ್ಲೇಶ ಭಜಂತ್ರಿ, ನಬಿಸಾಬ ಹುನಗುಂದ, ಬಸವರಾಜ್ ಕೇಸರಲ್ಲಿ, ರಾಜೇಸಾಬ ನದಾಫ್ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.