ಕುಂದಗೋಳ: ಎಸ್.ಐ.ಚಿಕ್ಕನಗೌಡರ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕುಕ್ಕರ್ ಚಿಹ್ನೆ ಮೂಲಕ ಮತದಾರರ ಬಳಿ ಮರಳಿದ್ದಾರೆ. ಸದ್ಯ ಎಸ್.ಐ.ಚಿಕ್ಕನಗೌಡರ ಪ್ರಚಾರ ನಡೆಸಿದ ಊರೆಲ್ಲೆಲ್ಲಾ ಸ್ವತಃ ಗ್ರಾಮಸ್ಥರೇ ಜೆಸಿಬಿ ಯಂತ್ರದ ಮೂಲಕ ಹೂಮಳೆ ಸುರಿಸಿ ಸನ್ಮಾನ ಗೌರವ ನೀಡಿ ಸ್ವಾಗತಿಸಿದರು.
ಎಸ್.ಐ.ಚಿಕ್ಕನಗೌಡರ ತಾವು ನಿಷ್ಪಕ್ಷಪಾತವಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಚಿತ್ರಣ ಜನರಿಗೆ ತೋರಿಸಿ ಮತ ಕೇಳ್ತಾ ಇದ್ದಾರೆ. ಸ್ವಾಭಿಮಾನದ ಅಲೆಯಲ್ಲಿ ಮತ್ತೊಮ್ಮೆ ಜನರ ಆಶೀರ್ವಾದ ಕೇಳುತ್ತಿರುವ ಚಿಕ್ಕನಗೌಡರ ಮಂಗಳವಾರ ರೇವಡಿಹಾಳ, ದೇವರಗುಡಿಹಾಳ, ಪರಸಾಪುರ, ಗಂಗಿವಾಳ, ತಿಮ್ಮಸಾಗರ, ಚನ್ನಾಪೂರ, ರಾಮಾಪೂರ, ಅಂಚಟಗೇರಿ ಗ್ರಾಮಗಳಲ್ಲಿ ಚುನಾವಣೆ ಪ್ರಚಾರ ನಡೆಸಿ ಜನರ ಮಡಿಲಿಗೆ ಅಭಿವೃದ್ಧಿ ಭರವಸೆ ತುಂಬಿ ಮತ ಕೇಳಿದ್ದಾರೆ.
ಪಕ್ಷೇತರನಾದರೂ ಸಹ ಯಾವ ರಾಷ್ಟ್ರೀಯ ಪಕ್ಷಕ್ಕಿಂತ ಕಡಿಮೆ ಇರದ ವರ್ಚಸ್ಸು, ರೋಡ್ ಶೋ, ಜನಬೆಂಬಲ, ಎಲ್ಲದಕ್ಕಿಂತ ಮಿಗಿಲಾಗಿ ನಿತ್ಯ ಭೇಟಿ ಕೊಟ್ಟ ಹಳ್ಳಿಗಳಲ್ಲಿ ನಿತ್ಯ ಹೊಸ ಹೊಸ ಕಾರ್ಯಕರ್ತರು ಸಾಲಾಗಿ ಬಂದು ಕುಕ್ಕರ್’ಗೆ ಬೆಂಬಲ ನೀಡುತ್ತಲಿರುವುದು ಗೌಡರ ಮುಖದಲ್ಲಿ ಗೆಲುವಿನ ಕಳೆ ತಂದಿದೆ.