News Karnataka Kannada
Tuesday, April 23 2024
Cricket
ಹುಬ್ಬಳ್ಳಿ-ಧಾರವಾಡ

ಕುಂದಗೋಳ: ಕುಕ್ಕರ್ ಚಿಹ್ನೆ ಮೂಲಕ ಮತದಾರರ ಬಳಿ ಮರಳಿದ ಚಿಕ್ಕನಗೌಡರ

Chikkagowda returns to voters with cooker symbol
Photo Credit : News Kannada

ಕುಂದಗೋಳ: ಎಸ್.ಐ.ಚಿಕ್ಕನಗೌಡರ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕುಕ್ಕರ್ ಚಿಹ್ನೆ ಮೂಲಕ ಮತದಾರರ ಬಳಿ ಮರಳಿದ್ದಾರೆ. ಸದ್ಯ ಎಸ್.ಐ.ಚಿಕ್ಕನಗೌಡರ ಪ್ರಚಾರ ನಡೆಸಿದ ಊರೆಲ್ಲೆಲ್ಲಾ ಸ್ವತಃ ಗ್ರಾಮಸ್ಥರೇ ಜೆಸಿಬಿ ಯಂತ್ರದ ಮೂಲಕ ಹೂಮಳೆ ಸುರಿಸಿ ಸನ್ಮಾನ ಗೌರವ ನೀಡಿ ಸ್ವಾಗತಿಸಿದರು.

ಎಸ್.ಐ.ಚಿಕ್ಕನಗೌಡರ ತಾವು ನಿಷ್ಪಕ್ಷಪಾತವಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಚಿತ್ರಣ ಜನರಿಗೆ ತೋರಿಸಿ ಮತ ಕೇಳ್ತಾ ಇದ್ದಾರೆ. ಸ್ವಾಭಿಮಾನದ ಅಲೆಯಲ್ಲಿ ಮತ್ತೊಮ್ಮೆ ಜನರ ಆಶೀರ್ವಾದ ಕೇಳುತ್ತಿರುವ ಚಿಕ್ಕನಗೌಡರ ಮಂಗಳವಾರ ರೇವಡಿಹಾಳ, ದೇವರಗುಡಿಹಾಳ, ಪರಸಾಪುರ, ಗಂಗಿವಾಳ, ತಿಮ್ಮಸಾಗರ, ಚನ್ನಾಪೂರ, ರಾಮಾಪೂರ, ಅಂಚಟಗೇರಿ ಗ್ರಾಮಗಳಲ್ಲಿ ಚುನಾವಣೆ ಪ್ರಚಾರ ನಡೆಸಿ ಜನರ ಮಡಿಲಿಗೆ ಅಭಿವೃದ್ಧಿ ಭರವಸೆ ತುಂಬಿ ಮತ ಕೇಳಿದ್ದಾರೆ.

ಪಕ್ಷೇತರನಾದರೂ ಸಹ ಯಾವ ರಾಷ್ಟ್ರೀಯ ಪಕ್ಷಕ್ಕಿಂತ ಕಡಿಮೆ ಇರದ ವರ್ಚಸ್ಸು, ರೋಡ್ ಶೋ, ಜನಬೆಂಬಲ, ಎಲ್ಲದಕ್ಕಿಂತ ಮಿಗಿಲಾಗಿ ನಿತ್ಯ ಭೇಟಿ ಕೊಟ್ಟ ಹಳ್ಳಿಗಳಲ್ಲಿ ನಿತ್ಯ ಹೊಸ ಹೊಸ ಕಾರ್ಯಕರ್ತರು ಸಾಲಾಗಿ ಬಂದು ಕುಕ್ಕರ್’ಗೆ ಬೆಂಬಲ ನೀಡುತ್ತಲಿರುವುದು ಗೌಡರ ಮುಖದಲ್ಲಿ ಗೆಲುವಿನ ಕಳೆ ತಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು