ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮದ ವಿದ್ಯಾರ್ಥಿಗಳಿಗೆ ಕುಂದಗೋಳ ಹರಭಟ್ಟ ಕಾಲೇಜ್’ನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಕ ಶಿಕ್ಷಕಿಯರ ಬಳಗ ತಾಲೂಕಿನ ಗುಡೇನಕಟ್ಟಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ಎಲ್.ಎಲ್ ಲಮಾಣಿ ಮಾತನಾಡಿ ಈ ಗ್ರಾಮದ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ನಮ್ಮ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇಂತಹ ವಿದ್ಯಾರ್ಥಿಗಳು ಮುಂದೆ ಅತ್ಯುತ್ತಮ ಪ್ರಜೆಗಳಾಗುತ್ತಾರೆ ಈ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪಡೆದ ತಂದೆ ತಾಯಿಗಳಿಗೆ ಕೃತಜ್ಞತೆಗಳು ಎಂದು ಹೇಳಿದರು. ಪ್ರವೀಣ್ ಕಂಬಳಿ ಶಾಂತಿನಾಥ ಮಲ್ಲಿಗವಾಡ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ವೇದಮೂರ್ತಿ ಚೆನ್ನವೀರ ಸ್ವಾಮಿ ಹಿರೇಮಠ, ಶಿಕ್ಷಕರಾದ ಎಚ್.ಟಿ ದೊಡ್ಡಮನಿ, ಬಿ.ಡಿ ಕಲಾರಿ, ಎಸ್.ಯು.ಅಕ್ಕಿ, ಅಶ್ವಿನಿ ಪಾಟೀಲ್, ಎಂ ಎಸ್ ಮುಲ್ಲಾನವರ, ಎಂ.ಎನ್,ಪೂಜಾರ, ಬಸವರಾಜ ಯೋಗಪ್ಪನವರ, ಚಿದಾನಂದ ಕುಸುಗಲ್, ಸಕ್ರಪ್ಪ ಕಮ್ಮಾರ, ಗುರುಪಾದಪ್ಪ ಹೊಸಳ್ಳಿ, ತರಕಪ್ಪ ಮಲ್ಲಿಗವಾಡ, ಶೇಖಪ್ಪ ಸಂಶಿ, ಶಾಂತಪ್ಪ ಕುಸುಗಲ್, ಧರಣೇಂದ್ರ ಮಲ್ಲಿಗವಾಡ ಹಾಗೂ ಶಾಲಾ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿ ಉಪಸ್ಥತರಿದ್ದರು.