News Karnataka Kannada
Saturday, April 20 2024
Cricket
ಹುಬ್ಬಳ್ಳಿ-ಧಾರವಾಡ

ಕುಂದಗೋಳ: ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

Students felicitated for scoring high marks
Photo Credit : News Kannada

ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮದ ವಿದ್ಯಾರ್ಥಿಗಳಿಗೆ ಕುಂದಗೋಳ ಹರಭಟ್ಟ ಕಾಲೇಜ್’ನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಕ ಶಿಕ್ಷಕಿಯರ ಬಳಗ ತಾಲೂಕಿನ ಗುಡೇನಕಟ್ಟಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಕಾಲೇಜು ಪ್ರಾಚಾರ್ಯ ಎಲ್.ಎಲ್ ಲಮಾಣಿ ಮಾತನಾಡಿ ಈ ಗ್ರಾಮದ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ನಮ್ಮ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇಂತಹ ವಿದ್ಯಾರ್ಥಿಗಳು ಮುಂದೆ ಅತ್ಯುತ್ತಮ ಪ್ರಜೆಗಳಾಗುತ್ತಾರೆ ಈ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪಡೆದ ತಂದೆ ತಾಯಿಗಳಿಗೆ ಕೃತಜ್ಞತೆಗಳು ಎಂದು ಹೇಳಿದರು. ಪ್ರವೀಣ್ ಕಂಬಳಿ ಶಾಂತಿನಾಥ ಮಲ್ಲಿಗವಾಡ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ವೇದಮೂರ್ತಿ ಚೆನ್ನವೀರ ಸ್ವಾಮಿ ಹಿರೇಮಠ, ಶಿಕ್ಷಕರಾದ ಎಚ್.ಟಿ ದೊಡ್ಡಮನಿ, ಬಿ.ಡಿ ಕಲಾರಿ, ಎಸ್.ಯು.ಅಕ್ಕಿ, ಅಶ್ವಿನಿ ಪಾಟೀಲ್, ಎಂ ಎಸ್ ಮುಲ್ಲಾನವರ, ಎಂ.ಎನ್,ಪೂಜಾರ, ಬಸವರಾಜ ಯೋಗಪ್ಪನವರ, ಚಿದಾನಂದ ಕುಸುಗಲ್, ಸಕ್ರಪ್ಪ ಕಮ್ಮಾರ, ಗುರುಪಾದಪ್ಪ ಹೊಸಳ್ಳಿ, ತರಕಪ್ಪ ಮಲ್ಲಿಗವಾಡ, ಶೇಖಪ್ಪ ಸಂಶಿ, ಶಾಂತಪ್ಪ ಕುಸುಗಲ್, ಧರಣೇಂದ್ರ ಮಲ್ಲಿಗವಾಡ ಹಾಗೂ ಶಾಲಾ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಈ ಸಂದರ್ಭದಲ್ಲಿ ಉಪಸ್ಥತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು