News Kannada
Tuesday, June 06 2023
ಹುಬ್ಬಳ್ಳಿ-ಧಾರವಾಡ

ಕುಂದಗೋಳ: ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ – ಎಂ.ಆರ್. ಪಾಟೀಲ

Thanks to all those who trusted me and chose me - M.R. Patil
Photo Credit : News Kannada

ಕುಂದಗೋಳ: ನಾನು ಕೆಲಸ ಮಾಡಿ, ನಂತರ ಜನರ ಮುಂದೆ ಹೋಗಿದ್ದೆ. ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ. ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದು ನೂತನ ಶಾಸಕ ಎಂ.ಆರ್. ಪಾಟೀಲ ಹೇಳಿದ್ದಾರೆ.

ಕುಂದಗೋಳ ಪಟ್ಟಣದ ಶಿವಾನಂದ ಮಠದ ಸಭಾಂಗಣದಲ್ಲಿ ಕುರುಬ ಸಮಾಜದಿಂದ ಗುರುವಾರ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕುರುಬ ಸಮಾಜ ಸೇರಿದಂತೆ ಎಲ್ಲಾ ಸಮಾಜದ ಮುಂಖಡರು ನನ್ನ ಕೈ ಹಿಡಿದಿದ್ದೀರಿ. ತಮ್ಮ ಸಮಸ್ಯೆಗಳಾಗಲಿ, ಇತರೆ ಕೆಲಸ ಕಾರ್ಯಗಳೇ ಇರಲಿ ದಿನದ 24 ಗಂಟೆಯೂ ಸ್ಪಂದಿಸುತ್ತೇನೆ’ ಎಂದು ಭರವಸೆ ನೀಡಿದರು.

ಪಟ್ಟಣದ ಹಿರೇಮಠದ ಶ್ರೀ ಶಿತಿಕಂಠೇಶ್ವರ ಸ್ವಾಮೀಜಿ, ಶಿವಾನಂದ ಮಠದ ಶ್ರೀ ಮಹಾಂತಸ್ವಾಮಿಗಳು ಆಶೀರ್ವಚನ ನೀಡಿದರು. ಇದೇ ವೇಳೆ ಪಟ್ಟಣದ ಕನಕದಾಸ ಯುವ ಸದಸ್ಯರು, ಮುಸ್ಲಿಂ ಮುಖಂಡರು, ತಾಲ್ಲೂಕಿನ ಹಲವಾರು ಗ್ರಾಮದ ನಾಗರಿಕರು ಶಾಸಕರನ್ನು ಸನ್ಮಾನಿಸಿದರು. ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಚುಳಕಿ, ಗುಳಪ್ಪ ಹಾಲಿ, ಕಲ್ಲಪ್ಪ ಬಂಡಿವಡ ಇತರರು ಉಪಸ್ಥಿತರಿದ್ದರು.

See also  ಬೆಳ್ತಂಗಡಿ: ವಿಶ್ವ ಮಾನವ ದಿನಾಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು