ಕುಂದಗೋಳ: ತೋಳದ ದಾಳಿಗೆ ಹದಿನೈದಕ್ಕೂ ಅಧಿಕ ಕುರಿ ಮರಿಗಳು ಮೃತಪಟ್ಟ ಘಟನೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಹೊರವಲಯದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಸಂಶಿ ಗ್ರಾಮದ ನಿಂಗನಗೌಡ ದಾರಿ ಪಕ್ಕದ ಹೊರವಲಯದಲ್ಲಿ ವಾಸವಿದ್ದ ಲಕ್ಷ್ಮೀಶ್ವರ ತಾಲೂಕಿನ ಶಿರಹಟ್ಟಿ ಗ್ರಾಮದ ನಿಂಗಪ್ಪ ಕರೆಪ್ಪ ಸಂಶಿ ಎಂಬುವವರ ಕುರಿ ದೊಡ್ಡಿಗೆ ರಾತ್ರೋರಾತ್ರಿ ದಾಳಿ ಮಾಡಿದ ತೋಳ ಹದಿನೈದಕ್ಕೂ ಅಧಿಕ ಕುರಿ ಮರಿಗಳನ್ನು ಕಚ್ಚಿ ಜೀವ ಹಾನಿ ಮಾಡಿದೆ ಎಂದು ರೈತ ತಿಳಿಸಿದ್ದಾನೆ.
ಇಂದು ಬೆಳಿಗ್ಗೆ ಕುರಿಗಾಹಿ ತೋಳ ದಾಳಿ ಮಾಡಿದ ಘಟನೆಯನ್ನು ಕಂಡು ಬೆರಗಾಗಿ ವಿಷಯವನ್ನು ಸ್ಥಳೀಯ ಪಶು ಆಸ್ಪತ್ರೆ ಅಧಿಕಾರಿಗಳ ಹಾಗೂ ಪೊಲೀಸ್ ಗಮನಕ್ಕೆ ತಂದಿದ್ದು ಪ್ರಾಥಮಿಕ ಹಂತದ ವರದಿ ನೀಡಿದ್ದಾನೆ. ಈ ಘಟನೆ ಕುಂದಗೋಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕುರಿಗಾಹಿ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ಪರಿಹಾರ ಸಿಗಬೇಕಾಗಿದೆ.