News Kannada
Tuesday, June 06 2023
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಜನ ಈಗಾಗಲೇ ತೀರ್ಮಾನಿಸಿದ್ದಾರೆ – ಗೆಹೋಟ್

People have already decided to bring Congress party to power: Gehlot
Photo Credit : Facebook

ಹುಬ್ಬಳ್ಳಿ: ಚುನಾವಣೆ ಹೊತ್ತಿನಲ್ಲಿ ಇಷ್ಟೊಂದು ಓಡಾಡುವ ಸ್ಥಿತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಯಾಕೆ ಬಂದಿದೆ? ಇಬ್ಬರು ರಾಷ್ಟ್ರೀಯ ನಾಯಕರು ಯಾಕೆ ಕರ್ನಾಟಕದಲ್ಲಿ ಬೀಡು ಬಿಟ್ಟಿದ್ದಾರೆ? ಎಂದು ಕಾಂಗ್ರೆಸ್ ಮುಖಂಡ ಹಾಗೂ ರಾಜಸ್ಥಾನ ಸಿಎಂ ಅಶೋಕ್ ಗೆಹೋಟ್ ಪ್ರಶ್ನೆ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳಿರುವ ರಾಜ್ಯಗಳನ್ನು ಹೋಲಿಸಿ ನೋಡಿ. ಯಾವ ರಾಜ್ಯದಲ್ಲಿ ಉತ್ತಮ ಆಡಳಿತವಿದೆ ಎಂದು ಮೋದಿ ಗಮನಿಸಲಿ. ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಈ ನಡುವೆ ಧರ್ಮಗಳ ನಡುವೆ ಒಡುಕು ಹುಟ್ಟಿಸಲಾಗುತ್ತಿದೆ. ಆದರೆ ಧರ್ಮ ಮತ್ತು ಜಾತಿ ಹೆಸರಲ್ಲಿ ರಾಜಕೀಯ ಬಹಳದಿನ ನಡೆಯಲ್ಲ. ಹಿಟ್ಲರ್ ಕೂಡ ಧರ್ಮದ ಹೆಸರು ಹೇಳಿಕೊಂಡು ಬಹಳ ಜನಪ್ರಿಯವಾಗಿದ್ದ. ಆ ನಂತರ ಹಿಟ್ಲರ್ ಜರ್ಮನಿಯನ್ನು ಹಾಳು ಮಾಡಿದ ಎಂದು ಗೆಹೋಟ್ ವ್ಯಂಗ್ಯವಾಡಿದ್ದಾರೆ.

ಕರ್ನಾಟಕದ ಜನರು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಲು ಈಗಾಗಲೇ ತೀರ್ಮಾನಿಸಿದ್ದಾರೆ. ಪ್ರಮುಖ ಪಕ್ಷಗಳ ನಾಯಕರ ಬಗ್ಗೆ ಭ್ರಷ್ಟರ ಗುಂಪು ಎಂದು ಪಿಎಮ್ ಕರೆಯುತ್ತಾರೆ. ಆರ್‌ಎಸ್ಎಸ್ ಮೋದಿಯವರ ಬಾಯಿ ಮುಚ್ಚಿಸಿದೆ. ಬಿಜೆಪಿಗೆ ಕಡಿಮೆ ಸೀಟ್ ಬಂದರೆ ಕುದುರೆ ವ್ಯಾಪಾರ ಮಾಡುವುದೇ ಕೆಲಸವಾಗಿದೆ. ದೇಶದಲ್ಲಿ ಒಂದೇ ಸರ್ಕಾರವಿರಲಿ ಅನ್ನೋ ಹುನ್ನಾರ ಮಾಡುತ್ತಿದ್ದಾರೆ. ಎಲ್ಲಾ ವಿರೋಧ ಪಕ್ಷಗಳ ಮೇಲೆ ಐಟಿ, ಇಡಿ, ಸಿಬಿಐ ರೇಡ್ ಮಾಡಿಸ್ತಾರೆ.

ರಾಜಸ್ತಾನದ ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲ ಕೊಟ್ಟಿದ್ದೇವೆ. ಫ್ರೀ ಕೊಟ್ಟರೆ ದಿವಾಳಿ ಆಗುವುದಾದರೆ ನಮ್ಮ ರಾಜ್ಯ ದೇಶದಲ್ಲಿ ಯಾಕೆ ಆರ್ಥಿಕವಾಗಿ ಉನ್ನತ ಸ್ಥಾನದಲ್ಲಿದೆ. ಸಾಮಾಜಿಕ ಸಾಮರಸ್ಯ ಹದಗೆಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಹೇಳಿದೆ. ಭಜರಂಗದಳ ನಿಷೇಧ ವಿಚಾರದಲ್ಲಿ ಕೋರ್ಟ್ ನಿಲುವೇ ನಮ್ಮ ನಿಲುವು ಎಂದು ಅಶೋಕ್ ಗೆಹೋಟ್ ಹೇಳಿದರು.

See also  ಧಾರವಾಡ: ದ್ವಿಚಕ್ರ ವಾಹನ ಹಸ್ತಾಂತರಿಸಿದ ಶಾಸಕ ಅಮೃತ ದೇಸಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು