ಹುಬ್ಬಳ್ಳಿ: ಸಚಿವರಾಗಿ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಸಂತೋಷ ಲಾಡ್ ಅವರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಮತ್ತು ಬೆಂಬಲಿಗರು ಸ್ವಾಗತ ಕೋರಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಕಲಘಟಗಿ, ಅಳ್ನಾವರ ಮತ್ತು ಹುಬ್ಬಳ್ಳಿ ಧಾರವಾಡ ಪ್ರವಾಸ ಮಾಡುತ್ತಿರುವೆ. ಕ್ಷೇತ್ರದ ಜನತೆಗೆ ಗೌರವ ಮತ್ತು ಅಭಿನಂದನೆ ಸಲ್ಲಿಸಲು ಬಂದಿದ್ದೇನೆ. ಹಿಂದೆ ನಾನು ಕಾರ್ಮಿಕ ಸಚಿವನಾಗಿದ್ದಾಗ ಕಡಿಮೆ ಸಮಯ ಸಿಕ್ಕಿತ್ತು. ಈಗ ಮತ್ತೆ ಅದೆ ಖಾತೆ ಸಿಕ್ಕಿದೆ ಹೆಚ್ಚಿನ ಕೆಲಸ ಮಾಡುವ ಗುರಿಯಿದೆ. ಗ್ಯಾರಂಟಿ ಬಗ್ಗೆ ಗುರುವಾರ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚೆ ಆಗುತ್ತದೆ.ಇನ್ನೂ ಎರಡು ಮೂರು ದಿನಗಳ ಸಿಹಿ ಸುದ್ದಿ ಸಿಗುತ್ತದೆ ಎಂದರು.
ಕಾರ್ಮಿಕ ಕಲ್ಯಾಣ ನಿಧಿಯನ್ನು ಬಿಜೆಪಿ ದುರ್ಬಳಕೆ ವಿಚಾರ ಪ್ರತಿಕ್ರಿಯಿಸಿ, ಈಗಾಗಲೇ ಮೊದಲು ರೆವಿನ್ಯೂ ಮೀಟಿಂಗ್ ಮಾಡಿರುವೆ. ಯಾವ ಯಾವ ಆರೋಪಗಳು ಅಂತ ಚೆಕ್ ಮಾಡಿ ಬಳಿಕ ಮಾತನಾಡುವೆ ಎಂದರು.