News Kannada
Wednesday, March 22 2023

ಗದಗ

ವಜಾಗೊಳಿಸಿದ್ದ ಸಾರಿಗೆ ನೌಕರರನ್ನು ನಾಲ್ಕು ವಾರಗಳಲ್ಲಿ ಮರುನೇಮಕ: ಸಚಿವ ಬಿ.ಶ್ರೀರಾಮುಲು

Photo Credit :

ಗದಗ : ರಾಜ್ಯದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಕೋವಿಡ್ ಸೋಂಕಿನ ತೀವ್ರತೆಗೂ ಮುನ್ನಾ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಕೆಲಸಕ್ಕೆ ಗೈರುಹಾಜರಿಯ ನೆಪ ನೀಡಿ ಸಾವಿರಾರೂ ಮುಷ್ಕರ ನಿರತರ ನೌಕರರನ್ನು ನಾಲ್ಕು ನಿಗಮದಿಂದ ಕೆಲಸದಿಂದ ವಜಾಗೊಳಿಸಲಾಗಿತ್ತು.

ಇದೀಗ ನಾಲ್ಕು ವಾರಗಳಲ್ಲಿ ವಜಾಗೊಳಿಸಲಾಗಿರುವಂತ ನೌಕರರನ್ನು ಮರುನೇಮಕ ಮಾಡಿಕೊಳ್ಳುವಂತೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಅಧಿಕಾರಿಗಳಿಗೆ ಡೆಡ್ ಲೈನ್ ನೀಡಿದ್ದಾರೆ.

ಈ ಸಂಬಂಧ ಇಂದು ನಗರದಲ್ಲಿ ಮಾತನಾಡಿದಂತ ಅವರು, ಮುಷ್ಕರದ ಸಂದರ್ಭದಲ್ಲಿ ವಜಾಗೊಳಿಸಲಾಗಿದ್ದಂತ ಸಾರಿಗೆ ನೌಕರರನ್ನು ಮರು ನೇಮಕದ ಬಗ್ಗೆ ಸೂಚಿಸಲಾಗಿದೆ. ನಾಲ್ಕು ನಿಗಮದ ಎಂಡಿಗಳಿಗೆ ಈಗಾಗಲೇ ಮರು ನೇಮಕಾತಿಗಾಗಿ ತಿಳಿಸಲಾಗಿದೆ. ನಾಲ್ಕು ವಾರದೊಳಗೆ ವಜಾಗೊಳಿಸಲಾಗಿದ್ದಂತ ನೌಕರರನ್ನು ಮರು ನೇಮಕ ಮಾಡಿಕೊಳ್ಳುವಂತೆ ಖಡಕ್ ಸೂಚನೆಯನ್ನು ಮತ್ತೆ ನೀಡಿರೋದಾಗಿ ತಿಳಿಸಿದರು.

ಅಂದಹಾಗೇ ಸಾರಿಗೆ ನೌಕರರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೆಲ ತಿಂಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಅನೇಕ ನೌಕರರು ಕೆಲಸಕ್ಕೆ ಗೈರು ಹಾಜರಾಗಿ ಮುಷ್ಕರದಲ್ಲಿ ನಿರತರಾಗಿದ್ದರು. ಮುಷ್ಕರ ನಿರತರನ್ನು ಕೆಲಸಕ್ಕೆ ಮರಳಿಸೋ ಸಂಬಂಧ ಎಚ್ಚರಿಕೆ ನೋಟಿಸ್ ಕೂಡ ನೀಡಲಾಗಿತ್ತು. ಇದಕ್ಕೂ ಜಗ್ಗದೇ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾ ನಿರತ ನೌಕರರನ್ನು ಕೆಲಸಕ್ಕೆ ಗೈರು ನೆಪವೊಡ್ಡಿ ಕೆಲಸದಿಂದ ವಜಾಗೊಳಿಸಲಾಗಿತ್ತು. ಈಗ ಸಾರಿಗೆ ಸಚಿವರು ನಾಲ್ಕು ವಾರದೊಳಗೆ ಈ ನೌಕರರನ್ನು ಮರುನೇಮಕ ಮಾಡಿಕೊಳ್ಳುವಂತೆ ಸೂಚಿಸಿ, ವಜಾಗೊಂಡಿದ್ದಂತ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

See also  ಗ್ರಾಮ ಸ್ವರಾಜ್ಯ ನಮ್ಮೆಲ್ಲರ ಮನಸ್ಸಿಗೆ ತುಂಬಾ ಹತ್ತಿರವಾದ ವಿಷಯ: ಡಾ ಅತುಲ್ ಜೈನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು