ಬೆಂಗಳೂರು, ; ಬ್ಯಾಟರಾಯನಪುರ ಕ್ಷೇತ್ರದ ಜಾಲಾ ಹೋಬಳಿ ವ್ಯಾಪ್ತಿಯ ಬಿ.ಕೆ.ಪಾಳ್ಯ ಗ್ರಾಮದ ಸರ್ವೆ ನಂ.7ರಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ 4.40ಎಕರೆ ಭೂಮಿಯನ್ನು ತಾಲೂಕು ಆಡಳಿತ ವಶಕ್ಕೆ ಪಡೆದಿದೆ.
ಯಲಹಂಕ ತಹಶೀಲ್ದಾರ್ ನರಸಿಂಹ ಮೂರ್ತಿ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ಸುಮಾರು 20 ಕೋಟಿ ರೂ.ಅಧಿಕ ಮೌಲ್ಯದ ಭೂಮಿಯಲ್ಲಿನ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿದೆ.
ಬಿ.ಕೆ.ಪಾಳ್ಯದ ಸರ್ವೆ ನಂ.೭ರಲ್ಲಿರುವ ಗೋಮಾಳವನ್ನು ಕಳೆದ ಕೆಲ ವರ್ಷಗಳಿಂದ ರಾಮಾಂಜನಪ್ಪ ಹಾಗೂ ತಂಡದವರು ದೇವಸ್ಥಾನ, ಅನಾಥಾಶ್ರಮದ ಹೆಸರೇಳಿಕೊಂಡು ಅಕ್ರಮವಾಗಿ ಒತ್ತುವರಿ ಮಾಡಿ ಭೂಕಬಳಿಕೆ ಮಾಡಿದ್ದಲ್ಲದೆ, ಅಮೆಜಾನ್ ಕಂಪನಿಯವರಿಗೆ ಬಾಡಿಗೆಗೆ ನೀಡಿದ್ದರು.
ಅಖಿಲ ಕರ್ನಾಟಕ ದಲಿತ ಅಭಿವೃದ್ಧಿ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಪಿ.ಕೆ.ಸುಬ್ರಮಣಿ ಎಂಬುವವರು ಕಂದಾಯ ಇಲಾಖೆಗೆ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ದೂರು ಸಲ್ಲಿಸಿದರು.
ಈ ಹಿನ್ನೆಲೆಯಲ್ಲಿ ಬಾಗಲೂರು ಯಲಹಂಕ ತಹಶೀಲ್ದಾರ್ ನರಸಿಂಹ ಮೂರ್ತಿ, ಬಾಗಲೂರು ನಾಡ ಕಚೇರಿ ಉಪ ತಹಶೀಲ್ದಾರ್ ಸಂತೋಷ್ ಗೌಡ,ಕಂದಾಯ ನಿರೀಕ್ಷಕ ಸಂದೀಪ್ ಸಿಂಗ್ ಅವರ ತಂಡ ದಾಳಿ ನಡೆಸಿ, ಸ್ಥಳ, ದಾಖಲೆಗಳ ಪರಿಶೀಲನೆ ನಡೆಸಿ ಶನಿವಾರ ಸರ್ಕಾರದ ವಶಕ್ಕೆ ಪಡೆದಿದ್ದಾರೆ.
ಒತ್ತುವರಿಯಾಗಿದ್ದ 2೦ ಕೋಟಿ ರೂಪಾಯಿ ಮೌಲ್ಯದ ಭೂಮಿ ಸರ್ಕಾರದ ವಶಕ್ಕೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.