News Karnataka Kannada
Thursday, April 25 2024
ಬೆಂಗಳೂರು

ಜೆಸಿಬಿ ಅಡಿಯಲ್ಲಿ ಸಿಲುಕಿದ ನಾಗರ ಹಾವಿನ ರಕ್ಷಣೆ

Untitled 16
Photo Credit :

ಬೆಂಗಳೂರು : ಇಲ್ಲಿನ ಕಾಮಾಕ್ಯ ಚಿತ್ರಮಂದಿರ ಸಮೀಪ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಜೆಸಿಬಿ ಅಡಿ ಸಿಲುಕಿದ್ದ ನಾಗರಹಾವನ್ನು ವನ್ಯಜೀವಿ ಸಂರಕ್ಷಕರು ರಕ್ಷಣೆ ಮಾಡಿದ್ದಾರೆ. ಬುಸುಗುಡುತ್ತಿದ್ದ ನಾಗರಹಾವು ಜೆಸಿಬಿ ಬಳಸಿ ಕೆಲಸ ಮುಂದುವರಿಸಲು ಅವಕಾಶ ನೀಡುತ್ತಿರಲಿಲ್ಲ.

ಅದನ್ನು ಹಿಡಿದು ಸುರಕ್ಷಿತ ಆವಾಸ ಸ್ಥಾನದಲ್ಲಿ ಬಿಟ್ಟಿದ್ದೇವೆ.

ಹಾವಿಗೆ ಯಾವುದೇ ಅಪಾಯ ಆಗಿಲ್ಲ’ ಎಂದು ವನ್ಯಜೀವಿ ಕಾರ್ಯಕರ್ತ ವಲ್ಲೀಶ್‌ ಕೆ. ಕೌಶಿಕ್‌ ಅವರು ತಿಳಿಸಿದರು. ಈ ಪ್ರದೇಶದಲ್ಲಿ ಒತ್ತುವರಿ ತೆರವುಗೊಳಿಸಿ ಅಲ್ಲಿ ಉದ್ಯಾನ ನಿರ್ಮಿಸಲು ನೆಲವನ್ನು ಸಮತಟ್ಟುಗೊಳಿಸಲಾಗುತ್ತಿತ್ತು ಎಂದು ಅವರು ಮಾಹಿತಿ ನೀಡಿದರು.

ಆವಾಸ ಸ್ಥಾನಕ್ಕೆ ಧಕ್ಕೆ ಉಂಟಾಗುತ್ತಿರುವುದರಿಂದ ನಗರದಲ್ಲಿ ಹಾವಿನಂತಹ ಅನೇಕ ಸರಿಸೃಪಗಳು ನಾಶವಾಗುತ್ತಿವೆ. ನಗರದಲ್ಲಿ 28 ಪ್ರಭೇದಗಳ ಹಾವುಗಳು ಕಂಡುಬರುತ್ತವೆ. ಮನುಷ್ಯ ತನ್ನ ವಸತಿಗಾಗಿ ಅವುಗಳ ಆವಾಸ ಸ್ಥಾನವನ್ನು ಕಬಳಿಸುತ್ತಿದ್ದು, ಅವುಗಳಿಗೆ ನೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು