ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ ಕಾಂಗ್ರೆಸ್ಗೆ ದೊರೆತಿರುವ ಜಯ ರಾಜ್ಯದ 7 ಕೋಟಿ ಜನರಿಗೆ ಸಿಕ್ಕಿರುವ ಜಯ ಎಂದರು.
ಜನರ ಆಶೀರ್ವಾದದಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೆಯಾತ್ರೆ ಮೂಲಕ ರಾಜ್ಯದಲ್ಲಿ ಪಕ್ಷದ ಪ್ರಚಾರ ಆರಂಭವಾಯಿತು. ಸಾಹಿತಿಗಳು, ಚಿಂತಕರು ಕಾಂಗ್ರೆಸ್ಗೆ ಬೆಂಬಲ ನೀಡಿದ್ದಾರೆ. ರೈತರು, ಮಹಿಳೆಯರು ನಮ್ಮ ಪರವಿದ್ದಾರೆ. 5 ಗ್ಯಾರಂಟಿಗಳನ್ನು ಇಂದೇ ಕ್ಯಾಬಿನೇಟ್ ಮೀಟಿಂಗ್ನಲ್ಲಿ ಒಪ್ಪಿಗೆ ನೀಡಿ ಜಾರಿಗೊಳಿಸುತ್ತೇವೆ ಎಂದರು. ಐದು ವರ್ಷಗಳ ಸುಸ್ಥಿರ ಆಡಳಿತದ ಭರವಸೆ ನೀಡುತ್ತೇನೆ ಎಂದರು.