ಬೆಂಗಳೂರು: ಸದ್ಯ ಕೈ ಪಾಳೆಯ ಮ್ಯಾಜಿಕ್ ನಂಬರ್ ಗಡಿದಾಟಿ 135 ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಆದ್ರೆ, ಇದೀಗ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಬಲ ಆಕಾಂಕ್ಷಿಗಳಾಗಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಕುತೂಹಲ ಮೂಡಿದೆ.
ಕಾಂಗ್ರೆಸ್ ಸೂತ್ರವೇನು?
ಐದು ವರ್ಷದ ಆಡಳಿತವನ್ನು ಶೇ.50ರ ಆಧಾರದ (ತಲಾ ಎರಡೂವರೆ ವರ್ಷ) ಹಂಚುವ ಫಾರ್ಮುಲಾ ಈಗಾಗಲೇ ಪಕ್ಷದ ವಲಯದಲ್ಲಿ ಚರ್ಚೆಯಲ್ಲಿದೆ. ಆದರೆ, ಇದನ್ನು ಡಿ.ಕೆ.ಶಿವಕುಮಾರ್ ಪಾಳೆಯ ಒಪ್ಪುತ್ತಾ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.
ಸಿದ್ದರಾಮಯ್ಯ ಮೊದಲು ಸಿಎಂ ಆದ್ರೆ ಎರಡು ವರ್ಷಕ್ಕೆ ಮಾತ್ರ. ನಂತರ ಡಿಕೆ ಶಿವಕುಮಾರ್ ಸಿಎಂ ಆದ್ರೆ ಮೂರು ವರ್ಷಗಳು ಅನ್ನೋ ಲೆಕ್ಕಾಚಾರ ಕಾಂಗ್ರೆಸ್ ಬಳಿ ಇದೆ ಎನ್ನಲಾಗುತ್ತಿದೆ.
ಡಿಕೆ ಶಿವಕುಮಾರ್ಗೆ ಸಿಎಂ ಹುದ್ದೆ ನೀಡಿದರೆ ಅವರ ಜೊತೆಗೆ ಮೂವರು ಡಿಸಿಎಂಗಳುನ್ನು ಮಾಡುವ ಪ್ಲಾನ್ ಕಾಂಗ್ರೆಸ್ ಹೈಕಮಾಂಡ್ ಮಾಡಿದೆ.
ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಟ್ಟಿಕೊಂಡು ಹಿಂದುಳಿದ ವರ್ಗದ ಒಬ್ಬರು, ದಲಿತ ಸಮುದಾಯದ ಒಬ್ಬರು, ಲಿಂಗಾಯತ ಸಮುದಾಯದ ಒಬ್ಬರು ಡಿಸಿಎಂ ಮಾಡುವ ಸಾಧ್ಯತೆ.