ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ ಪಕ್ಷವೊಂದರ ಅಭ್ಯರ್ಥಿ ಹಂಚಿದ್ದ ಕುಕ್ಕರ್ ಅಡುಗೆ ಮಾಡುವಾಗ ಸ್ಫೋಟಗೊಂಡು ಮಹಾಲಕ್ಷ್ಮೀ ಎಂಬ ಬಾಲಕಿ ಗಾಯಗೊಂಡ ಘಟನೆ ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರ ವ್ಯಾಪ್ತಿಯ ಕೂನಮುದ್ದನಹಳ್ಳಿಯಲ್ಲಿ ನಡೆದಿದೆ.
ಇದರ ಬೆನ್ನಲ್ಲೇ, ಕೂನಮುದ್ದನಹಳ್ಳಿ ನಿವಾಸಿಗಳು ಆತಂಕದಿಂದ ಕುಕ್ಕರ್ಗಳನ್ನು ರಸ್ತೆಗೆಸೆದಿದ್ದಾರೆ. ಪರಿಣಾಮವಾಗಿ ಅನೇಕ ಕುಕ್ಕರ್ಗಳು ರಸ್ತೆಯಲ್ಲಿ ಬಿದ್ದಿವೆ.