News Kannada
Monday, September 25 2023
ಬೆಂಗಳೂರು ನಗರ

ಮದ್ಯಕ್ಕೆ ಅನುಮತಿ: ಮೊದಲ ದಿನವೇ ಇಬ್ಬರು ಬಲಿ

Photo Credit :

ಮದ್ಯಕ್ಕೆ ಅನುಮತಿ: ಮೊದಲ ದಿನವೇ ಇಬ್ಬರು ಬಲಿ

ಬೆಂಗಳೂರು: ಲಾಕ್ ಡೌನ್ ಮೂರನೇ ಹಂತದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದರಿಂದ 40 ದಿನಗಳ ಬಳಿಕ ಕಂಠಪೂರ್ತಿ ಕುಡಿದ ಇಬ್ಬರು ಪ್ರಾಣ ಕಳಕೊಂಡಿರುವ ಘಟನೆಯು ನಡೆದಿದೆ.

ನಗರದ ಕಾಮಾಕ್ಷಿಪಾಲ್ಯದಲ್ಲಿ ಇಬ್ಬರು ಕುಡಿದು ಮೃತಪಟ್ಟ ಘಟನೆಯು ವರದಿಯಾಗಿದೆ. ದೇವದಾಸ ವಲಸೆ ಕಾರ್ಮಿಕ ಕಂಠಪೂರ್ತಿ ಕುಡಿದ ಬಳಿಕ ಚರಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಈತ ಪಶ್ಚಿಮ ಬಂಗಾಳದವನು ಎಂದು ತಿಳಿದುಬಂದಿದೆ.

ಈತ ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಸೋಮವಾರ ತನ್ನ ಸ್ನೇಹಿತ ಸಮರ್ಥ ಎಂಬಾತನೊಂದಿಗೆ ಹೋಗಿ ಮದ್ಯ ಖರೀದಿ ಮಾಡಿ ಕುಡಿದಿದ್ದಾನೆ. ಈಗ ಚರಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ.

ಸಿದ್ದೇನಹಳ್ಳಿಯಲ್ಲಿ ಮತ್ತೊಂದು ಪ್ರಕರಣವು ದಾಖಲಾಗಿದೆ. ಕರಣ್ ಸಿಂಗ್ ಎಂಬಾತನನ್ನು ಆತನ ಸ್ನೇಹಿತನೇ ಕುಡಿದ ಅಮಲಿನಲ್ಲಿ ಹತ್ಯೆ ಮಾಡಿದ್ದಾನೆ.

ಕಲಾಸಿಪಾಳ್ಯದಲ್ಲಿ ಯುವಕನೊಬ್ಬನಿಗೆ ಕುಡಿಯಲು ಹಣ ನೀಡದೆ ಇರುವ ಹಿನ್ನೆಲೆಯಲ್ಲಿ ಆತ ಆತ್ನಹತ್ಯೆಗೆ ಯತ್ನಿಸಿರುವಂತಹ ಘಟನೆಯು ವರದಿಯಾಗಿದೆ. 23 ವರ್ಷದ ಹರೀಶ್ ಎಂಬಾತನಿಗೆ ಪೋಷಕರು ಕುಡಿಯಲು ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

 

See also  2 ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಮಾಲ್, ಥಿಯೇಟರ್ ಗೆ ಪ್ರವೇಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು