ಬೆಂಗಳೂರು: ಎರಡನೇ ಹಂತದ ಲೋಕಸಭೆ ಚುನಾವಣೆಗೆ ಮತದಾನವು ಏಪ್ರಿಲ್ 18ರಂದು ನಡೆಯಲಿದ್ದು, ಬಹಿರಂಗ ಪ್ರಚಾರವು ಸಂಜೆ ಆರು ಗಂಟೆಗೆ ಅಂತ್ಯಗೊಂಡಿದೆ.
ಇಂದು ಸಂಜೆ 6 ಗಂಟೆಯಿಂದಲೇ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಇನ್ನು ಮನೆಮನೆ ಪ್ರಚಾರ ಮಾತ್ರ ಮಾಡಬಹುದಾಗಿದೆ.
ಗುರುವಾರ ನಡೆಯಲಿರುವ ಚುನಾವಣೆಗೆ ಮೊದಲು ಹೊರ ಜಿಲ್ಲೆ ಅಥವಾ ರಾಜ್ಯದ ಪ್ರಚಾರಕರು ಆರು ಗಂಟೆ ಬಳಿಕ ಯಾವುದೇ ಕ್ಷೇತ್ರದಲ್ಲಿ ಉಳಿದುಕೊಳ್ಳುವಂತಿಲ್ಲ.
ತುಂಬಾ ಕುತೂಹಲ ಕೆರಳಿಸಿರುವಂತಹ ಮಂಡ್ಯ ಲೋಕಸಭಾ ಕ್ಷೇತ್ರದಲ್ಲೂ ಅಬ್ಬರದ ಚುನಾವಣಾ ಪ್ರಚಾರವು ಅಂತ್ಯಗೊಂಡಿದೆ. ಇನ್ನು ಮತದಾರನ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಮತ್ತು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ.