ಬೆಂಗಳೂರು: ವಿಧಾನಸಭೆಯಲ್ಲಿ ಮಹಾಭಾರತದ ಕಥೆಯು ಚರ್ಚೆಗೆ ಬಂದ ಘಟನೆಯು ಸೋಮವಾರ ನಡೆದಿದ್ದು, ಸ್ಪೀಕರ್ ರಮೇಶ್ ಕುಮಾರ್ ಅವರು ಧರ್ಮರಾಯನನ್ನು ಖಳನಾಯಕ ಎಂದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಸದನದಲ್ಲಿ ಚರ್ಚಿಸುವ ವೇಳೆ ತನ್ನನ್ನು ಮಹಾಭಾರತದ ಕರ್ಣನಿಗೆ ಹೋಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಕರ್ಣ ಕೂಡ ಸಾಂದರ್ಭಿಕ ಶಿಶು ಆಗಿದ್ದ. ತಾಯಿ ಮಾತಿಗೆ ಪ್ರಾಣವನ್ನೇ ಕೊಟ್ಟವನು ಕರ್ಣ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು ಧರ್ಮರಾಜ ಒಬ್ಬ ಜೂಜುಕೋರ. ಆತ ತನ್ನ ಪತ್ನಿಯನ್ನೇ ಪಣವಾಗಿಟ್ಟುಕೊಂಡು ಜೂಜು ಆಡಿರುವುದು, ಆತ ಖಳನಾಯಕ ಎಂದು ಹೇಳುತ್ತಾ, ಮಹಾಭಾರತದ ಬಗ್ಗೆ ನಾವು ಸದನದ ಹೊರಗಡೆ ಚರ್ಚೆ ಮಾಡಬಹುದು ಎಂದು ಹೇಳಿದರು.
ವಿರೋಧ ಪಕ್ಷಗಳು ಸರ್ಕಾರಕ್ಕೆ ತಂದೆ-ತಾಯಿ, ಗೊತ್ತುಗುರಿಯೇ ಇಲ್ಲವೆಂದು ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಕ್ಕೆ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದರು. ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರೇ ಸರ್ಕಾರಕ್ಕೆ ತಂದೆ-ತಾಯಿ ಎಂದು ಹೇಳಿದರು.