ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಂಬರ್ ಗ್ರೀಸ್ ಅಕ್ರಮ ಮಾರಾಟ ಕೇಸ್ ದಾಖಲಾಗಿದೆ. ಅಂಬರ್ ಗ್ರೀಸ್ ಎಂದರೆ ವೀರ್ಯ ತಿಮಿಂಗಿಲದ ವಾಂತಿ ಘನಗಟ್ಟಿದ್ದ ಸ್ಥಿತಿಯಲ್ಲಿರುವ ವಸ್ತು.
ಕೆಜಿ ಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಸಯ್ಯದ್ ತಜ್ಮುಲ್ ಪಾಷಾ, ಸಲೀಂ ಪಾಷಾ, ರಫೀ ಉಲ್ಲಾ ಶರೀಫ್ ಮತ್ತು ನಾಸೀರ್ ಪಾಷಾ ಬಂಧಿತರು.
ಬಂಧಿತರಿಂದ 8 ಕೋಟಿ ರೂ. ಮೌಲ್ಯದ 6.7 ಕೆಜಿ ಅಂಬರ್ ಗ್ರೀಸ್ ಜಪ್ತಿ ಮಾಡಿಕೊಳ್ಳಲಾಗಿದದೆ. ಆರೋಪಿಗಳು ಕಾಡುಗೋಡಿಯ ಎಂ.ಆರ್.ಕೆ ಟೆಂಟ್ ಹೌಸ್ ಹಿಂಭಾಗದಲ್ಲಿ ದಂಧೆ ನಡೆಸುತ್ತಿದ್ದರು. ಈ ವೇಳೆ ದಾಳಿ ನಡೆಸಿದ್ದ ಕೆಜಿ ಹಳ್ಳಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 1.7 ಕೋಟಿ ರೂ. ಮೌಲ್ಯವಿದ್ದು, ಘನ ಮೇಣದ ವಾಸನೆಯಿಂದ ಕೂಡಿರುವ ಅಂಬರ್ ಗ್ರಿಸ್ ನ್ನು ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಗೆ ಬಳಸಲಾಗುತ್ತದೆ.