ಬೆಂಗಳೂರು: ಸಂಘಪರಿವಾರನ್ನು ಯಾರು ಟೀಕೆ ಮಾಡುತ್ತಾರೋ ಅವರು ದೇಶ ದ್ರೋಹಿಗಳು. RSS ರಾಷ್ಟ್ರಭಕ್ತಿ ಸಂಸ್ಥೆ. ರಾಷ್ಟ್ರದ್ರೋಹಿಗಳು ಬಹೋತ್ಪಾದಕರು ಉಗ್ರಗಾಮಿಗಳಿಗೆ ಬೆಂಬಲ ಕೊಡುವ ನೀವು ನಪುಸಂಕರು. ಕಾಂಗ್ರೇಸ್ ನವರು ರಾಷ್ಟ್ರದ್ರೋಹಿಗಳು, ದೇಶದ್ರೋಹಿಗಳು ಟಿಪ್ಪುಜಯಂತಿಯನ್ನು ಮಾಡುವ ನೀವು ನಪುಸಂಕರು ಕಾಂಗ್ರೆಸ್ ವಿರುದ್ಧ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ರೇಣುಕಾಚಾರ್ಯ, ರಾಷ್ಟ್ರ ಭಕ್ತಿ ಸಂಘಟನೆ RSS ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೇಸ್ ನವರಿಗೆ ಇಲ್ಲಾ. ದೇಶದಲ್ಲಿ ಕಾಂಗ್ರೇಸ್ ಅಡ್ರಸ್ ಇಲ್ಲಾ, ವಿನಾಃ ಕಾರಣ ನಿಮ್ಮ ನಾಲಿಗೆ ಹರಿಬಿಡಬೇಡಿ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಕಚ್ಚಾಟ ನಡೆಯುತ್ತಿದ್ದು, RSS ಬೈದರೆ ರಾಹುಲ್ ಗಾಂಧಿ ಅವರನ್ನು ಸಿಎಂ ಮಾಡುತ್ತಾರೆಂಬ ಬ್ರಮಾ ಲೋಕದಲ್ಲಿದ್ದಾರೆ ಎಂದರು.
ಸಂಘ ಪರಿವಾರದ ಬಗ್ಗೆ ಟೀಕೆ ಮಾಡಿದರೆ ಜನ ನಿಮನ್ನ ಧೂಳಿಪಟ ಮಾಡುತ್ತಾರೆ, 2023 ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿ ರಾಜಕೀಯದಲ್ಲಿ ಬಚ್ಚಾ, ರಾಜಕೀಯ ಪ್ರಜ್ಞೆಯಿಲ್ಲಾ, ದೇಶದ ಬಗ್ಗೆ ಗೌರವವಿಲ್ಲಾ. ದೇಶಭಕ್ತಿ ಸಂಘಟನೆಗಳನ್ನು ಗೌರವಿಸಲ್ಲ, ಓಟಿಗಾಗಿ ಅಲ್ಪಸಂಖ್ಯಾತರನ್ನ ಓಲೈಸುತ್ತಾರೆ, ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಂಘಪರಿವಾರನ್ನು ಯಾರು ಟೀಕೆ ಮಾಡುತ್ತಾರೋ ಅವರು ದೇಶ ದ್ರೋಹಿಗಳು.
RSS ರಾಷ್ಟ್ರಭಕ್ತಿ ಸಂಸ್ಥೆ.
ರಾಷ್ಟ್ರದ್ರೋಹಿಗಳು ಬಹೋತ್ಪಾದಕರು ಉಗ್ರಗಾಮಿಗಳಿಗೆ ಬೆಂಬಲ ಕೊಡುವ ನೀವು ನಪುಸಂಕರು.
ಕಾಂಗ್ರೇಸ್ ನವರು ರಾಷ್ಟ್ರದ್ರೋಹಿಗಳು, ದೇಶದ್ರೋಹಿಗಳು ಟಿಪ್ಪುಜಯಂತಿಯನ್ನು ಮಾಡುವ ನೀವು ನಪುಸಂಕರು.
— M P Renukacharya (@MPRBJP) May 30, 2022