ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸೋಮವಾರ ವಿಶ್ವ ಚೆಸ್ ಫೆಡರೇಶನ್ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದ 16 ವರ್ಷದ ಉಪ್ಪಳ ಪ್ರಣೀತ್ಗೆ 2.5 ಕೋಟಿ ರೂ. ಪ್ರೋತ್ಸಾಹ ನಗದು ಘೋಷಿಸಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಚೆಸ್ನಲ್ಲಿ ಪ್ರಣೀತ್ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದಕ್ಕೆ ಮುಖ್ಯಮಂತ್ರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಕೆಸಿಆರ್, ಪ್ರಣೀತ್ ಮತ್ತು ಅವರ ಪೋಷಕರನ್ನು ಸೋಮವಾರ ಸೆಕ್ರೆಟರಿಯೇಟ್ಗೆ ಕರೆಸಿಕೊಂಡಿದ್ದರು. ಅಲ್ಲದೆ ಕಷ್ಟಪಟ್ಟು ದುಡಿದು ಉತ್ತಮ ತರಬೇತಿ ನೀಡಿದ ಪ್ರಣೀತ್ ಪೋಷಕರನ್ನು ಅಭಿನಂದಿಸಿದರು. ಪ್ರಣೀತ್ ಅವರ ಉತ್ಸಾಹ ಮತ್ತು ಕಠಿಣ ಪರಿಶ್ರಮ ಅವರನ್ನು ಗ್ರ್ಯಾಂಡ್ಮಾಸ್ಟರ್ ಮಾಡಿತು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಪ್ರಣೀತ್ ಅವರು ಇನ್ನಷ್ಟು ಎತ್ತರವನ್ನು ತಲುಪಲಿ ಮತ್ತು ಭವಿಷ್ಯದಲ್ಲಿ ತೆಲಂಗಾಣ ರಾಜ್ಯ ದೇಶಕ್ಕೆ ಕೀರ್ತಿ ತರಲಿ ಎಂದರು. ಇದೇ ವೇಳೆ ಮುಖ್ಯಮಂತ್ರಿ ಪ್ರಣೀತ್ ಅವರಿಗೆ ತರಬೇತಿ, ಇತರ ವೆಚ್ಚಗಳಿಗಾಗಿ 2.5 ಕೋಟಿ ರೂ. ನೆರವು ನೀಡಿದರು.