ಚಾಮರಾಜನಗರ: ಕರ್ತವ್ಯದಲ್ಲಿದ್ದ ನಿರತರಾಗಿದ್ದ ಬಸ್ ನಿರ್ವಾಹಕರಿಗೆ ಸೋಮವಾರ ಮುಂಜಾನೆ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮೃತರನ್ನು ವಿಜಯಪುರದ ಹೀರಾಗೋಪಾಲ್ ರಾಥೋಡ್ (36) ಎಂದು ಗುರುತಿಸಲಾಗಿದೆ.
ರಾಥೋಡ್ ಅವರು ಬೆಳಿಗ್ಗೆ 6 ಗಂಟೆಗೆ ಗುಂಡ್ಲುಪೇಟೆಗೆ ಹೋಗುವ ಬಸ್ನ ನಿರ್ವಾಹಕರಾಗಿದ್ದರು. 5.45ಕ್ಕೆ ಬಸ್ಗೆ ಬಂದು ಕರ್ತವ್ಯಕ್ಕೆ ಸಿದ್ಧರಾಗುತ್ತಿದ್ದಾಗ ಹಠಾತ್ ಆಗಿ ಕುಸಿದು ಬಿದ್ದರು. ಕೂಡಲೇ ಅವರನ್ನು ಸಾರ್ವಜನಿಕ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಆ ವೇಳೆಗಾಲಲೇ ಸಾವನ್ನಪ್ಪಿದರು ಎಂದು ಸಾರಿಒಗೆ ಅಧಿಕಾರಿಗಳು ತಿಳಿಸಿದ್ದಾರೆ.