ಹೊಸ ಶಿಕ್ಷಣ ನೀತಿಯ ಪ್ರಕಾರ “ಮಾತೃಭಾಷೆಯಲ್ಲೇ ಶಿಕ್ಷಣ” ಇದರನ್ವಯ ಕೊಂಕಣಿ ಮಾತೃಭಾಷಿಕರಿಗಾಗಿ ಕೊಂಕಣಿ ಮಾಧ್ಯಮವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸುವ ಬಗ್ಗೆ ಕರ್ನಾಟಕ ರಾಜ್ಯದ ಘನ ಸರಕಾರದ ಮಾನ್ಯ ಶಿಕ್ಷಣ ಸಚಿವ ಶ್ರೀ ಸುರೇಶ್ ಕುಮಾರ್ ಅವರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಒಂದು ನಿಯೋಗದಿಂದ ಸುದೀರ್ಘವಾಗಿ ಚರ್ಚಿಸಲಾಯಿತು.
ಇದರ ಅಗತ್ಯತೆಯನ್ನು ವಿವರಿಸಲಾಯಿತು. ಇದಕ್ಕೆ ಸ್ಪಂದಿಸಿದ ಸಚಿವರು ಇದರ ಅನುಷ್ಟಾನಕ್ಕೆ ಬೇಕಾಗಿರುವ ನಿಯಮ ನಿಬಂಧನೆಗಳನ್ನು ಮನನ ಮಾಡಿ, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆಯ ಮಾತುಗಳನ್ನಾಡಿದರು.
ಈ ನಿಯೋಗದಲ್ಲಿ ಅಕಾಡೆಮಿ ಅಧ್ಯಕ್ಷರು ಡಾ. ಜಗದೀಶ್ ಪೈ, ಹಾಗೂ ಸದಸ್ಯರಾದ ಅರುಣ್ ಜಿ. ಶೇಟ್, ನವೀನ ನಾಯಕ್, ಗುರುಮೂರ್ತಿ ವಿ. ಶೇಟ್, ನರಸಿಂಹ ಕಾಮತ್ ಉಪಸ್ಥಿತರಿದ್ದರು.