News Kannada
Thursday, September 28 2023
ಬೆಂಗಳೂರು ನಗರ

ಬೆಂಗಳೂರು: ಶ್ರೀ ರಾಘವೇಂದ್ರ ಸ್ವಾಮಿಗಳ “ಉತ್ತರ ಆರಾಧನೆ”

Bengaluru: Sri Raghavendra Swamy's "Uttara Aradhana"
Photo Credit : News Kannada

ಬೆಂಗಳೂರು: ಜಯನಗರದ 5 ನೇ ಬಡಾವಣೆಯಲ್ಲಿರುವ  ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ “ಉತ್ತರ ಆರಾಧನೆ” ಪ್ರಯುಕ್ತ  ಪರಮ ಪೂಜ್ಯ 108 ಶ್ರೀ  ಶ್ರೀ ಸುಬುಧೇದ್ರತೀರ್ಥ ಶ್ರೀಪಾದರ  ಆದೇಶದಂತೆ ಆರ್. ಕೆ ವಾದಿಂದ್ರ ಆಚಾರ್ಯರ ಜಿ,ಕೆ ಆಚಾರ್ಯರ ನೇತೃತ್ವದಲ್ಲಿ ಅರ್ಚಕರಿಂದ ನಾನಾ ವಿಧ  ಪುಷ್ಪಗಳಿಂದ ರಾಯರ ಬೃಂದಾವನಕ್ಕೆ ಅಲಂಕಾರ, ಮತ್ತು ಜಯನಗರದ ರಾಜ ಬೀದಿಗಳಲ್ಲಿ ಮಹಾರಥೋತ್ಸ ವವು ಸಿಡಿ ಮದ್ದು , ನಾನಾವಿಧ ವಾದ್ಯಗಳಿಂದ ವಿಶೇಷವಾಗಿ ನೆರವೇರಿತು.

ನಂತರ ರಾಯರ ಮುಂಭಾಗದ ಪ್ರಕಾರದಲ್ಲಿ ನಾನಾವಿದ ವಾದ್ಯ ಉತ್ಸವ  ಶ್ರೀ ಹರಿ ಭಜನೆ  ನರ್ತನ ದೊಂದಿಗೆ ವಿಶೇಷವಾಗಿ ಮಂಗಳಾರತಿ ನೆರವೇರಿತು.

ಈ  ಸಂದರ್ಭದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಆ ಬಾಲ ವಯೋವೃದ್ಧದವರು ಸಹ  ಭಾಗವಹಿಸಿ ದಾಸರ ಪದಗಳನ್ನು ಹೇಳುತ್ತಾ ಹೆಜ್ಜೆ ಹಾಕುತ್ತಾ  ತಾಳ ತಟ್ಟುತ್ತಾ ಭಕ್ತಿ ಭಾವ ಪರವಶರಾಗಿ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಗುರುರಾಯರ ಅನುಗ್ರಹ ಪಡೆದು ನಂತರ ಶ್ರೀ ಗುರು ರಾಯರ ಮಹಾ ಪ್ರಸಾದ ರೂಪವಾಗಿ “ಅನ್ನ ಸಂತರ್ಪಣೆ”ಯ ಪ್ರಸಾದವನ್ನು ಸ್ವೀಕರಿಸಿ  ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

ಈ ದಿನ ಸಂಜೆ ಆರು ಮೂವತ್ತಕ್ಕೆ ಶ್ರೀಮತಿ ಸೀತಾ ಗುರುಪ್ರಸಾದ್ ಇವರ ನೇತೃತ್ವದಲ್ಲಿ ಭರತನಾಟ್ಯ ಕಾರ್ಯಕ್ರಮವು ನೆರವೇರಲಿದೆ ಎಂದು ಕಿಶೋರ್ ಆಚಾರ್ಯರು ತಿಳಿಸಿದರು.

See also  ಮಂಗಳೂರು: ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು