ಬೆಂಗಳೂರು: ಪ್ರೆಸ್ಕ್ಲಬ್ ಆಫ್ ಬೆಂಗಳೂರು 2022ನೇ ಸಾಲಿನ ಪ್ರೆಸ್ಕ್ಲಬ್ ‘ವರ್ಷದ ವ್ಯಕ್ತಿ’ ಹಾಗೂ ‘ವಿಶೇಷ ಪ್ರಶಸ್ತಿ’ ಮತ್ತು ‘ವಾರ್ಷಿಕ ಪ್ರಶಸ್ತಿ’ಯನ್ನು ಸಾಧಕರಿಗೆ ಪ್ರದಾನ ಮಾಡಲಾಯಿತು.
ಈ ಸಂಬಂಧ ನಡೆದ ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ಡಾ. ವಿ. ಗೋಪಾಲಗೌಡರು ಉದ್ಘಾಟಿಸಿದರು. ಈ ವೇಳೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಹಾಗೂ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹಾಗೂ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ರವರಿಗೆ ‘ವಿಶೇಷ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.
ಅಲ್ಲದೆ ‘ವಾರ್ಷಿಕ ಪ್ರಶಸ್ತಿ’ ಯನ್ನು ಹೆಚ್.ಎಸ್. ಬಲರಾಂ, ಅಗ್ರಹಾರ ಕೃಷ್ಣಮೂರ್ತಿ, ಗಂಗಾಧರ ಮೊದಲಿಯಾರ್, ಚೆನ್ನ ನಾಗರಾಜ್ ಎಂ, ಶ್ರೀಧರ ಬಿ.ಎನ್, ಕಿರಣ್ ಹೆಚ್.ವಿ, ಗೌತಮ್ ಮಾಚಯ್ಯ .ಎಂ, ರಾಜಶೇಖರ್ .ಎಸ್, ಹೆಚ್. ಮೂರ್ತಿ, ಸಂಗಮ್ ದೇವ್ ಐ.ಹೆಚ್, ಮುನೀರ್ ಅಹಮದ್ ಅಜದ್, ಕೆ.ವಿ. ಪರಮೇಶ್, ಸಿ.ಎಸ್. ಬೋಪಯ್ಯ, ಶ್ಯಾಂ ಬೋಜಕ್ , ಭಾಗ್ಯ ಪ್ರಕಾಶ್ .ಕೆ, ಅನಿಲ್ ವಿ. ಗೆಜ್ಜೆ, ಶ್ರೀಮತಿ ಗಾಯಿತ್ರಿ ನಿವಾಸ್, ಬಸವರಾಜು, ಹನುಮೇಶ್ ಯಾವಗಲ್, ಶಿವಣ್ಣ, ಶೋಭಾ ಎಂ.ಸಿ, ದಿವಾಕರ್ .ಸಿ, ನಾಗಭೂಷಣ್ ವೈ.ಎಂ, ವಿಲಾಸ್ ನಂದೂಕರ್, ಇ ನಾಗರಾಜು, ಪಿ. ರಾಜೇಂದ್ರ, ಶಿವಾನಂದ ತಗಡೂರು ಟಿ.ವಿ, ಶಿವಪ್ರಕಾಶ್ .ಎಸ್, ಓಂಕಾರ ಕಾಕಡೆ, ಜಯ ಪ್ರಕಾಶ್ .ಆರ್, ನರಸಿಂಹ ರಾವ್, ರಾಘವೇಂದ್ರ ಕೆ. (ತೋಗರ್ಸಿ), ಗಿರಿಪ್ರಕಾಶ್ .ಕೆ ಅವರಿಗೆ ಪ್ರದಾನ ಮಾಡಲಾಯಿತು.