News Kannada
Saturday, April 01 2023

ಬೆಂಗಳೂರು ನಗರ

ಬೆಂಗಳೂರು: ಅಣುವ್ರತ ಸಮಿತಿಯಿಂದ “ಅಮೃತ ಮಹೋತ್ಸವ” ಲಾಂಛನ ಬಿಡುಗಡೆ

Anu Vrat Samiti releases 'Amrit Mahotsav' logo
Photo Credit : By Author

ಬೆಂಗಳೂರು: ಜೈನ ಸಮುದಾಯದ ರಾಷ್ಟ್ರೀಯ ಅಣುವ್ರತ ಸಮಿತಿಯು ತನ್ನ 75ನೇ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಚಂದ್ರಾ ಬಡಾವಣೆಯ ಶ್ರೀ ಸಿದ್ಧಗಂಗಾ ವಿದ್ಯಾಪೀಠ ಶಾಲೆಯಲ್ಲಿ ಸಾವಿರಾರು ಮಕ್ಕಳ ಜೊತೆ ಅಣುವೃತ ಸಮಿತಿ ಅಮೃತ ಮಹೋತ್ಸವದ ಲಾಂಚನ ಬಿಡುಗಡೆ ಮಾಡಿತು.

ಲಾಂಛನ ಬಿಡುಗಡೆ ಮಾಡಿದ ಬೆಂಗಳೂರು ಅಣುವೃತ ಸಮಿತಿ ಅಧ್ಯಕ್ಷ ಶಾಂತಿಲಾಲ್ ಪೌರ್ವಾಲ್, ಅಣುವೃತ ಸಮಿತಿಯನ್ನು ‘ಅಣು ವಿಭ’ ಸಂಸ್ಥೆ ಎಂದು ನಾಮಕರಣ ಮಾಡಲಾಗಿದೆ. ಈ ವರ್ಷ ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳು ಮತ್ತು ಯುವ ಸಮೂಹಕ್ಕೆ ಪ್ರೇರಣೆ ನೀಡುವ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಲಾಗುವುದು. ವಿವಿಧ ಜನಜಾಗೃತಿ ಜಾಥಾ, ಚರ್ಚಾಸ್ಪರ್ಧೆ, ಉಪನ್ಯಾಸ, ವಿಚಾರ ಸಂಕಿರಣ, ಚಿತ್ರಕಲೆ, ಸಾಂಸ್ಕತಿಕ ಕಾರ್ಯಕ್ರಮಗಗಳನ್ನು ಸಹ ಆಯೋಜಿಲಾಗುವುದು ಎಂದರು.

ಜೈನಾಚಾರ್ಯರಾದ ಆಚಾರ್ಯ ಮಹಾಶ್ರಮಣಜೀ ಅವರ ಮಾರ್ಗದರ್ಶನದಲ್ಲಿ “ಅಮೃತ ಮಹೋತ್ಸವ” ಆಚರಣೆ ನಡೆಯುತ್ತಿದ್ದು, ದೇಶ ವಿದೇಶಗಳಲ್ಲಿ ವಿಶೇಷ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಣುವೃತ ಜನಾಂದೋಲನವನ್ನು ಯಶಸ್ವಿಗೊಳಿಸಲಾಗುವುದು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಅಣುವೃತ ಸಮಿತಿ ಬೆಂಗಳೂರು ಕಾರ್ಯದರ್ಶಿ ಮಾಣಿಕ್ ಸಂಚೇತಿ, ಸಂಘಟನಾ ಕಾರ್ಯದರ್ಶಿ ನಿರ್ಮಲಾ ಪೊಕ್ರಾನ್, ಶಾಂತಿ ಸಕಲೇಚ, ಸಂಯೋಜಕ ಬಿ.ವಿ.ಚಂದ್ರಶೇಖರಯ್ಯ, ಸಿದ್ಧಗಂಗಾ ಶಾಲೆಯ ಪ್ರಾಂಶುಪಾಲರಾದ ಟಿ.ಎಂ. ಹಂಸ, ಪ್ರಕಾಶ್ ಯೋಗಿ ಗುರೂಜಿ ಉಪಸ್ಥಿತರಿದ್ದರು.

See also  ಮಿಲಿಟರಿ ಶಾಲೆಯಲ್ಲಿ ಕಲಿತವರಿಂದ ಅಪ್ರತಿಮ ಸಾಧನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು